ಮನೆ ಜ್ಯೋತಿಷ್ಯ ಬಿಪಿನ್ ರಾವತ್ ದುರ್ಮರಣ: 13 ತಿಂಗಳ ಹಿಂದೆಯೇ ನುಡಿಯಲಾಗಿದ್ದ ಸ್ಪೋಟಕ ಭವಿಷ್ಯ

ಬಿಪಿನ್ ರಾವತ್ ದುರ್ಮರಣ: 13 ತಿಂಗಳ ಹಿಂದೆಯೇ ನುಡಿಯಲಾಗಿದ್ದ ಸ್ಪೋಟಕ ಭವಿಷ್ಯ

0

ರಾವತ್ ದಂಪತಿಗಳ ಅಂತ್ಯ ಸಂಸ್ಕಾರ ಸಕಲ ಸೇನಾ ಗೌರವಗಳೊಂದಿಗೆ ದೆಹಲಿಯ ಕಂಟೋನ್ಮೆಂಟ್ ಪ್ರದೇಶದ ಚಿತಾಗಾರದಲ್ಲಿ ನಡೆದಿದೆ. ಸುಮಾರು ಹತ್ತು ಕಿಲೋಮೀಟರ್ ಸಾಗಿದ ಅಂತಿಮಯಾತ್ರೆಯ ಮೆರವಣಿಗೆಯುದ್ದಕ್ಕೂ ಸಾವಿರಾರು ಜನ ಪಾರ್ಥಿವ ಶರೀರವನ್ನು ಹಿಂಬಾಲಿಸಿದ್ದರು. ದೇಶ ವಿದೇಶದ ಕೋಟ್ಯಂತರ ಜನರು ಅಂತಿಮ ಸಂಸ್ಕಾರವನ್ನು ವೀಕ್ಷಿಸಿದ್ದರು. ಇವೆಲ್ಲದರ ನಡುವೆ, ಜನವರಿಯಲ್ಲಿ ಪ್ರಕಟಗೊಂಡಿದ್ದ ಮ್ಯಾಗಜೀನ್ ಒಂದರಲ್ಲಿ ಸೇನಾ ಮುಖ್ಯಸ್ಥರ ಸಾವಿನ ಬಗ್ಗೆ ಉಲ್ಲೇಖ ಮಾಡಿರುವುದು ಭಾರೀ ಸಂಚಲನ ಮೂಡಿಸುತ್ತಿದೆ.

ಈ ಹಿಂದೆ ಕೋಡಿಮಠದ ಶ್ರೀಗಳು ಮತ್ತು ಮೈಲಾರ ಭವಿಷ್ಯದಲ್ಲೂ ಗಣ್ಯವ್ಯಕ್ತಿಗಳ ಸಾವು ಎನ್ನುವ ಭವಿಷ್ಯವನ್ನು ನುಡಿಯಲಾಗಿತ್ತು. ಆದರೆ, ಜ್ಯೋತಿಷ್ಯ ಮಾಸಿಕದಲ್ಲಿ ಸೇನಾ ಮುಖ್ಯಸ್ಥರೆಂದೇ ಉಲ್ಲೇಖಿಸಲಾಗಿದೆ. ಜೊತೆಗೆ, ಡಿಸೆಂಬರ್ ತಿಂಗಳ ಒಂದು ದಿನ ಭಾರೀ ಗಂಡಾತರ ಎದುರಾಗಲಿದೆ ಎಂದೂ ಉಲ್ಲೇಖಿಸಲಾಗಿದೆ.

ಕೇತು ಗ್ರಹದ ಪಥಸಂಚಲನದಿಂದಾಗಿ, ಅಂದರೆ ಜುಲೈ 25ರ ನಂತರ ಈ ಘಟನೆ: ಕೇತು ಗ್ರಹದ ಪಥಸಂಚಲನದಿಂದಾಗಿ, ಅಂದರೆ ಜುಲೈ 25ರ ನಂತರ ಈ ಘಟನೆ ನಡೆಯಬಹುದು. ಹಾಗಾಗಿ, ಡಿಸೆಂಬರ್ ಹದಿನಾಲ್ಕು ಎನ್ನುವುದು ಗಡುವು ಎಂದು ಆ ನಿಯತಕಾಲಿಕದಲ್ಲಿ ಉಲ್ಲೇಖವಾಗಿದೆ. ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರ ಸೇನಾ ಸಿಬ್ಬಂದಿ ಮೃತ ಪಟ್ಟಿರುವುದಕ್ಕೂ, ಈ ಜ್ಯೋತಿಷ್ಯಕ್ಕೂ ತಾಳೆಯಾಗುತ್ತಿದೆ. ಹಾಗಾಗಿ, ಜ್ಯೋತಿಷ್ಯ, ಭವಿಷ್ಯ, ಪಂಚಾಂಗದ ಬಗ್ಗೆ ಯಾರೂ ಕೀಳಾಗಿ ಮಾತನಾಡಬೇಡಿ ಎನ್ನುವ ಚರ್ಚೆಯೂ ಸಾಮಾಜಿಕ ತಾಣದಲ್ಲಿ ಜೋರಾಗಿ ನಡೆಯುತ್ತಿದೆ.