ಧಾರವಾಡ: ಆರೋಗ್ಯ ವಿಮೆ ಮಾಡಿಸಿಕೊಂಡಿದ್ದರೂ ಅದನ್ನು ಕ್ಲೇಮ್ ಮಾಡಿದಾಗ ವಿಮೆ ಹಣ ಕೊಡಲು ನಿರ್ಲಕ್ಷ್ಯ ವಹಿಸಿದ ಖಾಸಗಿ ವಿಮಾ ಕಂಪನಿಗೆ ಧಾರವಾಡ ಗ್ರಾಹಕರ ಆಯೋಗ 3 ಲಕ್ಷ ರೂ. ದಂಡ ವಿಧಿಸಿದೆ.
ಹುಬ್ಬಳ್ಳಿಯ ನವನಗರದ ನಿವಾಸಿ ರುದ್ರಗೌಡ ಪಾಟೀಲ ಅವರು ಖಾಸಗಿ ಕಂಪನಿಯೊಂದರ ನೌಕರ. ಅವರು ವರ್ಷಗಳ ಹಿಂದೆ, ಜನರಲ್ ಇನ್ಸೂರೆನ್ಸ್ ಕಂಪನಿಯಿಂದ 3 ಲಕ್ಷದವರೆಗಿನ ವೈಯಕ್ತಿಕ ಅಪಘಾತ ಮತ್ತು ಆರೋಗ್ಯದ ವಿಮೆ ಪಾಲಿಸಿಯನ್ನು ಮಾಡಿಸಿದ್ದರು. ಪಾಲಿಸಿ ಚಾಲ್ತಿಯಲ್ಲಿರುವಾಗಲೇ ದೂರುದಾರರಿಗೆ ಹೃದಯ ಸಂಬಂಧಿಸಿದ ತೊಂದರೆಯಾಗಿ ಅವರು ಎಸ್.ಡಿ.ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ರೂ.3,85,250/- ಹಣವನ್ನು ಖರ್ಚು ಮಾಡಿ ಶಸ್ತ್ರಚಿಕಿತ್ಸೆ ಪಡೆದಿದ್ದರು.
ಚಿಕಿತ್ಸಾ ವೆಚ್ಚದ ಹಣದ ಮರುಪಾವತಿಗಾಗಿ ರುದ್ರಗೌಡ ಪಾಟೀಲ ಅವರು, ತಾವು ವಿಮೆ ಮಾಡಿಸಿರುವ ಕಂಪನಿಗೆ ಕ್ಲೇಮ್ ಅರ್ಜಿ ಸಲ್ಲಿಸಿದ್ದರು. ಸದರಿ ಅರ್ಜಿಯ ಮೇಲೆ ವಿಮಾ ಕಂಪನಿಯವರು ಯಾವುದೇ ಆದೇಶ ಮಾಡದೇ ಪೆಂಡಿಂಗ್ ಇಟ್ಟಿದ್ದರು. ಪದೇ ಪದೇ ವಿಚಾರಿಸಿದಾಗಲೂ ವಿಮೆ ಹಣ ಬಿಡುಗಡೆಯ ಬಗ್ಗೆ ಯಾವುದೇ ಸ್ಪಂದನೆ ಸಿಗಲಿಲ್ಲ. ವಿಮೆ ಕಂಪನಿಯವರ ವರ್ತನೆಯಿಂದ ಬೇಸತ್ತ ರುದ್ರಗೌಡ ಅವರು, ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಅವರು, ದೂರುದಾರರು ವೈಯಕ್ತಿಕ ಅಪಘಾತ ಮತ್ತು ಆರೋಗ್ಯ ವಿಮೆ ಸೌಲಭ್ಯಕ್ಕೆ ಒಳಪಟ್ಟಿದ್ದು ಅವರ ವಿಮಾ ಪಾಲಿಸಿ ಚಾಲ್ತಿಯಿದ್ದಾಗ, ವೈದ್ಯಕೀಯ ವೆಚ್ಚದ ಹಣವನ್ನು ದೂರುದಾರನಿಗೆ ಅವರಿಗೆ ಅವಶ್ಯಕತೆಯಿದ್ದಾಗ ನೀಡದಿರುವುದು ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನತೆ ಆಗುತ್ತದೆ ಎಂದು ಅಭಿಪ್ರಾಯಪಟ್ಟು, ಸೇವೆ ವಿಳಂಬ ಮಾಡಿದ ಕಂಪನಿಗೆ ದಂಡ ವಿಧಿಸಿದ್ದಾರೆ.
ದೂರುದಾರರು ತಮ್ಮ ಫಿರ್ಯಾದಿಯಲ್ಲಿ ಶಸ್ತ್ರಚಿಕಿತ್ಸೆಗಾಗಿ ರೂ.3,85,250/-ಗಳನ್ನು ಖರ್ಚು ಮಾಡಿದ್ದರು. ಆದರೆ ಅವರು ಮಾಡಿಸಿದಂತಹ ವಿಮಾ ಪಾಲಸಿಯಲ್ಲಿ ರೂ.3 ಲಕ್ಷದವರೆಗೆ ಕ್ಲೇಮ್ ಮೊತ್ತ ಇದ್ದುದರಿಂದ ದೂರುದಾರನಿಗೆ ರೂ.3ಲಕ್ಷ ವೈದ್ಯಕೀಯ ವೆಚ್ಚದ ಹಣ ನೀಡುವಂತೆ ವಿಮಾ ಕಂಪನಿಯವರಿಗೆ ನ್ಯಾಯಾಲಯ ಆದೇಶಿಸಿದೆ. ಜೊತೆಗೆ ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗೆ ರೂ.50,000/-ಗಳನ್ನು ಪರಿಹಾರ ರೂಪವಾಗಿ ಕೊಡಬೇಕು ಮತ್ತು ಪ್ರಕರಣದ ಖರ್ಚು ವೆಚ್ಚ ರೂ.10,000/-ಗಳನ್ನು ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ತೀರ್ಪು ನೀಡಿದೆ.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಮಿನಿ ಉದ್ಯೋಗ ಮೇಳ..!
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.