ಹಾಸನ: ಹಾಸನ ನಗರದಲ್ಲಿ ಭಯ ಹಾಗೂ ಆತಂಕ ಉಂಟುಮಾಡುವಂತ ಘಟನೆ ನಡೆದಿದೆ. ಹಾಸನದ ಮೂರು ಖಾಸಗಿ ಶಾಲೆಗಳಿಗೆ ಬಾಂಬ್ ಇಟ್ಟು ಸ್ಪೋಟ ಮಾಡಲಾಗುವುದು ಎಂಬ ಇ-ಮೇಲ್ ಸಂದೇಶ ಬಂದಿರುವ ಘಟನೆ ತಡರಾತ್ರಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ ಹಾಗೂ ಪಾಲಕರಲ್ಲಿ ಭೀತಿಯ ವಾತಾವರಣ ಉಂಟಾಗಿದೆ.
ಬಾಂಬ್ ಬೆದರಿಕೆ ಸಂದೇಶವು ವಿದ್ಯಾಸೌಧ ಪಬ್ಲಿಕ್ ಶಾಲೆ, ವಿದ್ಯಾಸೌಧ ಕಿಡ್ಸ್ ಶಾಲೆ, ಹಾಗೂ ಕೆ.ಆರ್.ಪುರಂ, ಇಂಡಸ್ಟ್ರಿಯಲ್ ಏರಿಯಾ ಹಾಗೂ ವಿಜಯನಗರ ಪ್ರದೇಶದಲ್ಲಿರುವ ಇತರೆ ಶಾಲೆಗಳಿಗೆ ಕಳುಹಿಸಲಾಗಿದೆ. “ಒಂದು ಗಂಟೆ ಒಳಗೆ ಶಾಲಾ ಕಟ್ಟಡವನ್ನು ಸ್ಫೋಟಿಸುತ್ತೇನೆ” ಎಂಬ ಕೆಟ್ಟ ಉದ್ದೇಶದ ಇಮೇಲ್ ಸಂದೇಶವು ದುಷ್ಕರ್ಮಿಯೊಬ್ಬರಿಂದ ಆಗಮಿಸಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಈ ಮಧ್ಯೆ, ವಿದ್ಯಾಸೌಧ ಶಾಲೆ ಹಾಗೂ ಕಿಡ್ಸ್ ಶಾಲೆ ಮಂಜೇಗೌಡ ಎಂಬುವವರಿಗೆ ಸೇರಿದವು ಎಂದು ತಿಳಿದುಬಂದಿದೆ. ತಕ್ಷಣದಂತೆ ಶಾಲಾ ಪ್ರಾಂಶುಪಾಲರು ಹಾಸನ ನಗರ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಘಟನೆ ಸಂಬಂಧ ತಡರಾತ್ರಿ ಪೊಲೀಸರ ತಂಡ ಹಾಗೂ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಧಾವಿಸಿ ತ್ವರಿತ ಪರಿಶೀಲನೆ ನಡೆಸಿದೆ. ಶಾಲಾ ಕಟ್ಟಡ, ಸುತ್ತಮುತ್ತಲ ಪ್ರದೇಶ ಹಾಗೂ ಒಳಾಂಗಣವನ್ನು ಶೋಧಿಸಿ ಯಾವುದೇ ಸಂಶಯಾಸ್ಪದ ವಸ್ತುಗಳಿರುವುದೇ ಎಂಬುದನ್ನು ನಿಖರವಾಗಿ ಪರಿಶೀಲಿಸಲಾಗಿದೆ.
ಈ ಬೆದರಿಕೆ ಸಂದೇಶವನ್ನೊಬ್ಬ ಅನಾಮಧೇಯ ದುಷ್ಕರ್ಮಿ ಕಳುಹಿಸಿರುವುದರಿಂದ, ಈಗ ಸೈಬರ್ ಕ್ರೈಂ ತಂಡ ಕೂಡ ತನಿಖೆಗೆ ನಡೆಸುತ್ತಿದೆ. ಇ-ಮೇಲ್ ಪಠ್ಯದ ಮೂಲ, ಐಪಿಯೊಂದಿಗೆ ಕಳುಹಿಸಿದ ಸ್ಥಳ, ಹಾಗೂ ಇತರ ಡಿಜಿಟಲ್ ತಂತ್ರಜ್ಞಾನಗಳ ನೆರವಿನಿಂದ ಈ ದುಷ್ಕರ್ಮಿಯ ಗುರುತು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿ ಇದೆ.














