ಬೆಂಗಳೂರು : ಕಬ್ಬು ಪ್ರತಿ ಟನ್ಗೆ 3,300 ರೂ. ನಿಗದಿಪಡಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ನಿನ್ನೆ ಕಾರ್ಖಾನೆಗಳ ಮಾಲೀಕರು, ರೈತರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ದರು. ಹೆಚ್ಚುವರಿಯಾಗಿ 100 ರೂಪಾಯಿ ರೈತರಿಗೆ ನೀಡಲು ಸಭೆಯಲ್ಲಿ ನಿರ್ಣಯ ಆಗಿತ್ತು.
50 ರೂ. ಮಾಲೀಕರು ಮತ್ತು 50 ರೂ. ಸರ್ಕಾರ ನೀಡುವಂತೆ ಆಗಿದ್ದ ನಿರ್ಣಯಕ್ಕೆ ಸರ್ಕಾರ ಆದೇಶ ಮುದ್ರೆಯೊತ್ತಿದೆ ಎಂದು ಹೇಳಲಾಗಿದೆ.














