ಮನೆ ಸುದ್ದಿ ಜಾಲ ಪದ್ಮಶ್ರೀ ಡಾ. ಮಾತಾ ಬಿ. ಮಂಜಮ್ಮ ಜೋಗತಿ ಹಾಗೂ ಏಕಲವ್ಯ ಪ್ರಶಸ್ತಿ ವಿಜೇತ ಎ. ವಿ....

ಪದ್ಮಶ್ರೀ ಡಾ. ಮಾತಾ ಬಿ. ಮಂಜಮ್ಮ ಜೋಗತಿ ಹಾಗೂ ಏಕಲವ್ಯ ಪ್ರಶಸ್ತಿ ವಿಜೇತ ಎ. ವಿ. ರವಿ ಉಪಸ್ಥಿತಿಯಲ್ಲಿ ಶ್ರೀ ಮಣಿಕಂಠ ಫೌಂಡೇಶನ್ ಉದ್ಘಾಟನೆ

0

ಮೈಸೂರು: ಸಮಾಜ ಸೇವೆಯನ್ನು ಧ್ಯೇಯವಾಗಿಟ್ಟುಕೊಂಡು ಕಾರ್ಯನಿರ್ವಹಿಸಲಿರುವ ಶ್ರೀ ಮಣಿಕಂಠ ಫೌಂಡೇಶನಿನ ಭವ್ಯ ಉದ್ಘಾಟನಾ ಸಮಾರಂಭವು ಜೂನ್ 17ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರಿನ ವಿಜಯನಗರ 4ನೇ ಹಂತದ ರಾಜು ಕಾರ್ನರ್ ಹತ್ತಿರ ನಡೆಯಲಿದೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಮಾತಾ ಬಿ. ಮಂಜಮ್ಮ ಜೋಗತಿ ಹಾಗೂ ಅಂತರಾಷ್ಟ್ರೀಯ ದೇಹದಾರ್ಢ್ಯ ಕ್ರೀಡಾಪಟು, ಭಾರತ ಶ್ರೇಷ್ಠ ಮತ್ತು ಭಾರತೀಯ ಶ್ರೀ ಸ್ಪರ್ಧೆ ವಿಜೇತ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಹಾಗೂ ದಕ್ಷಿಣ ಭಾರತದ ಚಲನಚಿತ್ರ ನಟ ಎ. ವಿ. ರವಿ ಭಾಗವಹಿಸಲಿದ್ದಾರೆ.

ಇವರ ಗೌರವಾನ್ವಿತ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಶುಭ ಸಮಾರಂಭದಲ್ಲಿ ಶ್ರೀ ವಿನಯ್ ಹಾಗೂ ಶ್ರೀಮತಿ ಮೋನರಾಜ್ ಇವರನ್ನು ಸ್ವಾಗತಿಸಲಿದ್ದಾರೆ ಎಂದು ಫೌಂಡೇಶನ್ ಪ್ರಕಟಣೆಯಲ್ಲಿ ತಿಳಿಸಿದೆ.

“ಸಮಾಜ ಸೇವೆಯೇ ನಮ್ಮ ಸಂಕಲ್ಪ” ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಶ್ರೀ ಮಣಿಕಂಠ ಫೌಂಡೇಶನ್ ಸಮಾಜದ ಸೇವೆಗೆ ಸದಾ ಬದ್ಧವಾಗಿದೆ. ಫೌಂಡೇಶನಿನ ಸೇವಾ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಅಗತ್ಯವಿರುವ ಎಲ್ಲರಿಗೂ ಉಚಿತ ಮಧ್ಯಾಹ್ನದ ಊಟವನ್ನು ನೀಡಲಾಗುತ್ತಿದೆ.
ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಫೌಂಡೇಶನ್ ಮನವಿ ಮಾಡಿದೆ.