ಮನೆ ರಾಜ್ಯ ಸವಾಲ್ ಪತ್ರಿಕೆ ಮತ್ತು ಟಿವಿಯ ಪ್ರಧಾನ ಸಂಪಾದಕ ಪ್ರದೀಪ್ ಅವರಿಗೆ ಸನ್ಮಾನ

ಸವಾಲ್ ಪತ್ರಿಕೆ ಮತ್ತು ಟಿವಿಯ ಪ್ರಧಾನ ಸಂಪಾದಕ ಪ್ರದೀಪ್ ಅವರಿಗೆ ಸನ್ಮಾನ

0

ಮೈಸೂರು(Mysuru): ಶ್ರೀ ಚಾಮುಂಡೇಶ್ವರಿ ಗೆಳೆಯರ ಬಳಗದ ವತಿಯಿಂದ 15ನೇ ವರ್ಷದ ಶ್ರೀ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ `ಸವಾಲ್ ಪತ್ರಿಕೆ ಮತ್ತು ಟಿವಿ’ಯ ಪ್ರಧಾನ ಸಂಪಾದಕರಾದ ಪ್ರದೀಪ್ ಅವರನ್ನು ಸನ್ಮಾನಿಸಲಾಯಿತು.

ಬುಧವಾರ ಜನತಾ ನಗರದ ರೋಟರಿ ಡೆಫ್ ಅಂಡ್ ಡಂಬ್ ಶಾಲೆ ಎದುರಿನ ಮೈದಾನ ಸಾಹುಕಾರ್ ಚೆನ್ನಯ್ಯ ರಸ್ತೆಯ 13ನೇ ಅಡ್ಡರಸ್ತೆ ಬಳಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ವರ್ಧಂತಿ ಪ್ರಯುಕ್ತ ಭಕ್ತಾದಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಚಾಮುಂಡೇಶ್ವರಿ ಗೆಳೆಯರ ಬಳಗದ ವಿನಯ್, ಹರೀಶ್.ಜಿ.ಎಸ್, ಸಂಜೀವ್ ಕುಮಾರ್.ಎಸ್, ಮಾಜಿ ಮಹಾಪೌರರಾದ ಚಿಕ್ಕಣ್ಣ, ಸಮಾಜ ಸೇವಕರಾದ ಅರುಣ್ ಕುಮಾರ್, ರಮೇಶ್ ಗೌಡ, ದಿನೇಶ್ ಗೌಡ, ಹರೀಶ್ ಮೊಗಣ್ಣ, ಪದ್ಮನಾಭ ಕ್ಲಿನಿಕ್ ವೈದ್ಯ ಡಾ.ಅನಂತ ಪಿ.ಭಟ್, ಎಲ್.ಆರ್. ಲಾ ಅಸೋಸಿಯೇಟ್ಸ್ ವಕೀಲರು ಲೋಕೇಶ್. ಆರ್ ಮತ್ತು ಸರಸ್ವತಿಪುರಂ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ರವೀಂದ್ರ ಉಪಸ್ಥಿತರಿದ್ದರು.