ಮನೆ ರಾಜ್ಯ ನವೆಂಬರ್ ೧೧ ರಿಂದ ೧೩ ರವರೆಗೆ ೮೬ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನ: ಮಹೇಶ್ ಜೋಷಿ

ನವೆಂಬರ್ ೧೧ ರಿಂದ ೧೩ ರವರೆಗೆ ೮೬ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನ: ಮಹೇಶ್ ಜೋಷಿ

0

ಬೆಂಗಳೂರು : 86 ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನವು ನವೆಂಬರ್ ೧೧, ೧೨ ಮತ್ತು ೧೩ ರಂದು ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ್‌ ಜೋಶಿ ತಿಳಿಸಿದ್ದಾರೆ.
ಇಂದು ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಪರ್ಕ ಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮ್ಮೇಳನದ ಬಗ್ಗೆ ಮುಖ್ಯಮಂತ್ರಿ  ಬಸವಬರಾಜ ಬೊಮ್ಮಾಯಿ ಅವರು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ತಿಳಿಸಿದರು.
ನವೆಂಬರ್‌ 11 ರಂದು ಕನಕದಾಸ ಜಯಂತಿ ಇದ್ದು, ಅಂದು ಸಾಹಿತ್ಯ ಸಮ್ಮೇಳನದ ಉದ್ಘಾಟನೆ  ನಡೆಯಲಿದೆ. ನಂತರ 12 ರಂದು ಎರಡನೇ ಶನಿವಾರ ಮತ್ತು ನ.13 ರಂದು  ಭಾನುವಾರವಿರುತ್ತದೆ, ಈ ಮೂರು ದಿನಗಳು ಸರ್ಕಾರಿ ರಜೆ ಇರುವುದರಿಂದ ಸಮ್ಮೇಳನದಲ್ಲಿ ಸರ್ಕಾರಿ ನೌಕರರು ಹಾಗೂ ಶಿಕ್ಷಕ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅನುಕೂಲವಾಗುತ್ತದೆ ಎಂದರು.