ಅಷ್ಟಾಂಗ ಯೋಗದ ಪ್ರಕಾರಗಳು ಯಾವವು ಅವುಗಳಿಂದಾಗುವ ಉಪಯೋಗವೇನು ಎಂಬುದರ ಮಾಹಿತಿ ಇಲ್ಲಿದೆ. ಈ ಅಷ್ಟಾಂಗ ಯೋಗವು ಪತಂಜಲಿ ಯೋಗ ಸೂತ್ರದಲ್ಲಿ ಬರುತ್ತದೆ. 8 ಅಂಗಗಳಿಗೆ ಸಂಬಂಧಿಸಿದ ಯೋಗವಾಗಿದೆ.
ಅಷ್ಟಾಂಗ ಯೋಗದ 8 ಅಂಗಗಳು
ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ.
ಯಮ ಮತ್ತು ನಿಯಮ
ಯಮ ಮತ್ತು ನಿಯಮ ಎಂದರೆ ಯೋಗ ಮಾಡುವಾಗ ಪಾಲನೆ ಮಾಡಬೇಕಾದ ನಿಯಮಗಳನ್ನು ತಿಳಿಸುವುದಾಗಿದೆ. ಸಾಮಾಜಿಕವಾಗಿ ಮತ್ತು ವಯಕ್ತಿಕವಾಗಿ ಯಾವ ರೀತಿಯ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು, ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು ಎನ್ನುವ ಬಗ್ಗೆ ಈ ಯಮ ಮತ್ತು ನಿಯಮ ತಿಳಿಸಿಕೊಡುತ್ತದೆ.
ಆಸನ
ಆಸನಗಳು ದೈಹಿಕ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ಬಗ್ಗೆ ತಿಳಿಸುತ್ತದೆ. ಅದೇ ರೀತಿ ಆರೋಗ್ಯವನ್ನು ಕಾಪಾಡಿಕೊಳ್ಳಲು ದೈಹಿಕವಾಗಿ ಮಾಡಬೇಕಾದ ಆಸನಗಳ ಬಗ್ಗೆ ಅಷ್ಟಾಂಗ ಯೋಗದ ಮೂರನೇ ಹಂತವಾದ ಆಸನದಲ್ಲಿ ಹೇಳಲಾಗುತ್ತದೆ.
ಪ್ರಾಣಾಯಮ
ಆಸನಗಳನ್ನು ಮಾಡುವಾಗ ಮುಖ್ಯವಾಗಿ ಗಮನಿಸಬೇಕಾಗಿರುವುದು ಉಸಿರಾಟದ ಏರಿಳಿತವನ್ನು. ಅದಕ್ಕೆ ಪ್ರಾಣಾಯಾಮದ ಅಭ್ಯಾಸ ನೆರವಾಗುತ್ತದೆ. ಪ್ರಾಣಾಯಾಮ ಎಂದರೆ ಉಸಿರಾಟದ ಏರಿಳಿತದ ಬಗೆಗಿನ ತಂತ್ರವನ್ನು ಅಳವಡಿಸಿಕೊಳ್ಳಲು ಮಾಡಬೇಕಾದ ಅಭ್ಯಾಸವಾಗಿದೆ. ಪ್ರಾಣಾಯಾಮವನ್ನು ವಜ್ರಾಸನ, ಪದ್ಮಾಸನಗಳತಹ ಆಸನಗಳಲ್ಲಿ ಕುಳಿತು ಅಭ್ಯಸಿಸಬಹುದಾಗಿದೆ.
ಪ್ರತ್ಯಾಹಾರ
ಇಂದ್ರಿಯಗಳನ್ನು ನಿಯಂತ್ರಿಸುವ ಬಗ್ಗೆ ಪ್ರತ್ಯಾಹಾರದಲ್ಲಿ ಹೇಳಲಾಗುತ್ತದೆ. ಪ್ರತ್ಯಾಹಾರ ಎಂದರೆ ಮುಖ್ಯವಾಗಿ ರುಚಿ, ವಾಸನೆ, ಕಣ್ಣು, ಕಿವಿ, ಸ್ಪರ್ಶ ಈ ಐದು ಪಂಚೇಂದ್ರಿಯಗಳನ್ನು ನಿಯಂತ್ರಣದಲ್ಲಿರಿಸಿ ಏಕಾಗ್ರತೆಯನ್ನು ಸಾಧಿಸುವ ಹಂತವಾಗಿದೆ. ಹೀಗಾಗಿ ಅಷ್ಟಾಂಗ ಯೋಗದಲ್ಲಿ ಪ್ರತ್ಯಾಹಾರ ಮಹತ್ವದ ಪಾತ್ರವಹಿಸುತ್ತದೆ.
ಧಾರಣ
ಧಾರಣ ಎಂದರೆ ಏಕಾಗೃತೆ. ಪ್ರತ್ಯಾಹಾರಕ್ಕಿಂತ ಮುಂದಿನ ಹಂತ ಇದಾಗಿದೆ. ಇಂದ್ರಿಯಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಒಂದೇ ವಸ್ತುವಿನ ಮೇಲೆ ಏಕಾಗೃತೆಯನ್ನು ಸಾಧಿಸುವುದನ್ನು ಧಾರಣ ಎಂದು ಕರೆಯಲಾಗುತ್ತದೆ.
ಈ ಧಾರಣ ಶಕ್ತಿಯಿಂದ ದೇಹದಲ್ಲಿ ಮಾನಸಿಕ ಚಂಚಲತೆಯನ್ನು ನಿಯಂತ್ರಣ ಮಾಡಬಹುದಾಗಿದೆ.
ಸಮಾಧಿ
ಅಷ್ಟಾಂಗ ಯೋಗದಲ್ಲಿ ಕೊನೆಯ ಸ್ಥಿತಿ ಅದುವೇ ಸಮಾಧಿ. ಇದು ಯೋಗದ ಕೊನೆಯ ಹಂತ ಕೂಡ ಆಗಿದೆ. ಬಾಹ್ಯದ ಜಂಜಾಟಗಳಿಂದ ಸಂಪೂರ್ಣವಾಗಿ ಮುಕ್ತವಾಗಿ ಒಂದೇ ವಸ್ತುವಿನ ಮೇಲೆ ಅಥವಾ ಉಸಿರಾಟದ ಮೇಲೆ ಏಕಾಗೃತೆಯನ್ನು ಹೊಂದುವ ಸ್ಥಿತಿಯಾಗಿದೆ. ಸಮಾಧಿಯ ಸ್ಥಿತಿಗೆ ಹೋದ ಮೇಲೆ ಹೊರಗಿನ ಯಾವುದೇ ಆಗುಹೋಗುಗಳಾಗಲೀ, ಬಾಹ್ಯ ಪ್ರಪಂಚದ ಅರಿವಾಗಲೀ ಇರುವುದಿಲ್ಲ.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.