ಮನೆ ರಾಜ್ಯ ರಾಜ್ಯದ ಹಲವೆಡೆ ಇಂದು ಭಾರಿ ಮಳೆ

ರಾಜ್ಯದ ಹಲವೆಡೆ ಇಂದು ಭಾರಿ ಮಳೆ

0

ಬೆಂಗಳೂರು (Bengaluru): ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಕೂಡ ಭಾರಿ ಮಳೆಯಾಗಲಿದೆ. ಮಲೆನಾಡು ಮತ್ತು ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಧಾರಕಾರ ಮಳೆಯಾಗಲಿದ್ದು, ರಾಜ್ಯದ ಇತರ ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಾಳೆಯವರೆಗೂ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮತ್ತೊಂದೆಡೆ ಕರಾವಳಿ ಜಿಲ್ಲೆಯ ಸಮುದ್ರ ಭಾಗದಲ್ಲಿ 40 ರಿಂದ 50 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಇದರಿಂದ ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ರಾಜಧಾನಿ ಬೆಂಗಳೂರಿನಲ್ಲಿಂದು ಗರಿಷ್ಟ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಉಳಿದಂತೆ ಮಂಗಳೂರಿನಲ್ಲಿ 27-24,ಶಿವಮೊಗ್ಗದಲ್ಲಿ 27-21, ಬೆಳಗಾವಿಯಲ್ಲಿ 27-19, ಮೈಸೂರಿನಲ್ಲಿ 26-20, ಮಂಡ್ಯದಲ್ಲಿ 27-21, ಕೊಡಗಿನಲ್ಲಿ 22-18, ರಾಮನಗರದಲ್ಲಿ 27-21, ಹಾಸನದಲ್ಲಿ 26-19, ಚಾಮರಾಜನಗರದಲ್ಲಿ 26-20, ಚಿಕ್ಕಬಳ್ಳಾಪುರದಲ್ಲಿ 26-19, ಕೋಲಾರದಲ್ಲಿ 27-21, ತುಮಕೂರಿನಲ್ಲಿ 26-20, ಉಡುಪಿಯಲ್ಲಿ 28-24, ಚಿಕ್ಕಮಗಳೂರಿನಲ್ಲಿ 26-19, ದಾವಣಗೆರೆಯಲ್ಲಿ 28-21,
ಚಿತ್ರದುರ್ಗದಲ್ಲಿ 27-20,‌ ಹಾವೇರಿಯಲ್ಲಿ 28-21, ಬಳ್ಳಾರಿಯಲ್ಲಿ 29-23, ಗದಗದಲ್ಲಿ 29-21, ಕೊಪ್ಪಳದಲ್ಲಿ 29-22, ವಿಜಯಪುರದಲ್ಲಿ 29-22, ಬೀದರ್ ನಲ್ಲಿ 29-21, ಕಲಬುರಗಿಯಲ್ಲಿ 30-22, ಬಾಗಲಕೋಟೆಯಲಿ 30-22 ಡಿಗ್ರಿ ಸೆಲ್ಸಿಯಸ್ ಇರಲಿದೆ.