ಮನೆ ಸುದ್ದಿ ಜಾಲ ಗುಂಡ್ಲುಪೇಟೆ: ಹುಲಿ ದಾಳಿ, ಎತ್ತು ಸಾವು

ಗುಂಡ್ಲುಪೇಟೆ: ಹುಲಿ ದಾಳಿ, ಎತ್ತು ಸಾವು

0

ಗುಂಡ್ಲುಪೇಟೆ(Gundlupete):  ಹುಲಿ ದಾಳಿಯಿಂದಾಗಿ ಎತ್ತು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಮಂಚಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮೊಣಕು ಬೆಟ್ಟದ ತಪ್ಪಲಿನ ಜಮೀನಿನಲ್ಲಿ ಸಿದ್ದರಾಜು ಶೆಟ್ಟಿ ಎಂಬ ರೈತರು ಕೆಲಸ ಮಾಡುತ್ತಿದ್ದ ಸಮಯದಲ್ಲಿ ಹುಲಿ ಎತ್ತುಗಳ ಮೇಲೆ ದಾಳಿ ನಡೆಸಿ ಒಂದು ಎತ್ತನ್ನು ಕೊಂದುಹಾಕಿದೆ.

ಹುಲಿ ದಾಳಿಯಿಂದ ಆತಂಕಕ್ಕೀಡಾಗಿರುವ ಗ್ರಾಮಸ್ಥರು ಹುಲಿಯು ಮನುಷ್ಯರ ಮೇಲೆ ದಾಳಿ ನಡೆಸುವ ಮುನ್ನ ಅರಣ್ಯ ಇಲಾಖೆಯು ಕೂಡಲೇ ಹುಲಿಯನ್ನು ಸೆರೆಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.

ಅಲ್ಲದೇ ಬಡ ರೈತನಿಗೆ ಸೂಕ್ತ ಪರಿಹಾರವನ್ನು ಅಧಿಕಾರಿಗಳು ದೊರಕಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.