ಮನೆ ರಾಜ್ಯ ಪತ್ರಕರ್ತರು, ಜನಪ್ರತಿನಿಧಿಗಳಿಗೆ ಯೋಗ ಶಿಬಿರ

ಪತ್ರಕರ್ತರು, ಜನಪ್ರತಿನಿಧಿಗಳಿಗೆ ಯೋಗ ಶಿಬಿರ

0

ಮೈಸೂರು(Mysuru): ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯರು ಹಾಗೂ ನಗರಪಾಲಿಕೆ ಸದಸ್ಯರು ಯೋಗ ಶಿಭಿರದಲ್ಲಿ ಪಾಲ್ಗೊಂಡು ವಿವಿಧ ಆಸನಗಳನ್ನು ಪ್ರದರ್ಶಿಸಿದರು.

ನಗರದ ಸರಸ್ವತಿಪುರಂನಲ್ಲಿರುವ ಜವರೇಗೌಡ ಉದ್ಯಾನವನದಲ್ಲಿ. ಯೋಗ ದಸರಾ ಉಪಸಮಿತಿ ಹಮ್ಮಿಕೊಂಡಿದ್ದ ಯೋಗ ಶಿಭಿರ ಕಾರ್ಯಕ್ರಮವನ್ನು ಶಾಸಕ ಎಲ್.ನಾಗೇಂದ್ರ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಶಾಸಕ ಎಲ್.ನಾಗೇಂದ್ರ, ಅನೇಕ ಸಮಸ್ಯೆಗಳಿಗೆ ಯೋಗ ಉತ್ತಮ ಪರಿಹಾರ. ಜನರು ತಮ್ಮ ಒತ್ತಡದ ಜೀವನದಲ್ಲಿ ನಿಯಮಿತವಾಗಿ ಯೋಗವನ್ನು ಮಾಡುವ ಮೂಲಕ ಜನರು ತಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು ಎಂದರು.

ಮೈಸೂರಿಗೂ ಯೋಗಕ್ಕೂ ನಂಟಿದೆ. ನನ್ನ ಕ್ಷೇತ್ರವ್ಯಾಪ್ತಿಯಲಿರುವ ಗೋಕುಲಂ ಬಡಾವಣೆ ಯೋಗ ಗುರುಗಳ ತವರೆನಿಸಿದೆ. ಅಲ್ಲಿಗೆ ಪ್ರತೀ ವರ್ಷ ದೇಶ, ವಿದೇಶಗಳಿಂದ ಸಾವಿರಾರು ಮಂದಿ ಆಗಮಿಸಿ ಯೋಗವನ್ನು ಕಲಿಯುತ್ತಿದ್ದಾರೆ. ಇದು ಮೈಸೂರಿಗೆ ಹೆಮ್ಮೆಯ ವಿಚಾಋ ಎಂದು ಹೇಳಿದರು.

ನಮ್ಮ ನೆಚ್ಚಿನ ಪ್ರಧಾನಿ ಮೋದಿ ಅವರು ವಿಶ್ವಕ್ಕೇ ಯೋಗವನ್ನು ಪರಿಚಯಿಸಿದರು. ೨೦೧೫ರಲ್ಲಿ ವಿಶ್ವದ ೧೬೭ ದೇಶಗಳು ಯೋಗವನ್ನು ಆಚರಿಸಿದವು. ಯೋಗ ದಿನಾಚರಣೆಗೆ ಪ್ರಮುಖ ಕಾರಣಕರ್ತರು ನಮ್ಮ ನೆಚ್ಚಿನ ಪ್ರಧಾನ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಲಕ್ಷಾಂತರ ಮಂದಿಯನ್ನು ಒಂದೆಡೆ ಸೇರಿಸಿ ಯೋಗ ಮಾಡುವ ಮೂಲಕ ದಾಖಲೆ ನಿರ್ಮಿಸಲು ಸಿದ್ಧತೆ ನಡೆಸುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಯೋಗ ದಸರಾ ಸಮಿತಿ ಅಧ್ಯಕ್ಷ ಬಾಲಕೃಷ್ಣ, ಉಪ ಮೇಯರ್ ರೂಪ, ನಗರಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಶಿವಕುಮಾರ್, ಪ್ರಮೀಳಾ ಭರತ್, ಡಾ.ಲಕ್ಷ್ಮೀನಾರಾಯಣ ಶಣೈ, ಶ್ರೀಹರಿ, ಡಾ.ಪುಷ್ಪ, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ಡಾ.ಕುಸುಮ, ಗಜಾನನ ಹೆಗಡೆ, ಡಾ.ಮಹೇಶ್, ದೇವರಾಜ್ ಮುಂತಾದವರು ಹಾಜರಿದ್ದರು.