ಮನೆ ರಾಜ್ಯ ಮಳೆ ಹಾನಿ: ಬಿಬಿಎಂಪಿಗೆ 350 ಕೋಟಿ ರೂ. ನೀಡಲು ಸರ್ಕಾರ ಒಪ್ಪಿಗೆ

ಮಳೆ ಹಾನಿ: ಬಿಬಿಎಂಪಿಗೆ 350 ಕೋಟಿ ರೂ. ನೀಡಲು ಸರ್ಕಾರ ಒಪ್ಪಿಗೆ

0

ಬೆಂಗಳೂರು(Bengaluru): ಮಳೆಯಿಂದ ಉಂಟಾಗಿರುವ ಹಾನಿಗೆ ಪರಿಹಾರ ನೀಡಬೇಕೆಂಬ ಬಿಬಿಎಂಪಿ ಮನವಿಗೆ ಸರ್ಕಾರ ಸ್ಪಂದಿಸಿದ್ದು, 350 ಕೋಟಿ ರೂ. ನೀಡಲು ಒಪ್ಪಿಗೆ ಸೂಚಿಸಿದೆ.

ಬಿಬಿಎಂಪಿ ಮನವಿ ಸಲ್ಲಿಸಿದ 10 ದಿನದ ನಂತರ ನಗರಾಭಿವೃದ್ಧಿ ಇಲಾಖೆ ಸೆ.28ರಂದು ಪರಿಹಾರ ಮೊತ್ತಕ್ಕೆ ಅನುಮೋದನೆ ನೀಡಿದೆ. ಕೆರೆಗಳ ನಡುವಿನ ಸಂಪರ್ಕ ಜಾಲವನ್ನು (ರಾಜಕಾಲುವೆ) ದುರುಸ್ತಿಪಡಿಸಲು ₹317 ಕೋಟಿ ವೆಚ್ಚ ಮಾಡಬೇಕು ಎಂದು ಸೂಚಿಸಲಾಗಿದೆ.

ಮಳೆಯಿಂದ ತೀವ್ರಹಾನಿಯಾಗಿರುವ ಮಹದೇವಪುರ ವಿಧಾನಸಭೆ ಕ್ಷೇತ್ರಕ್ಕೆ ₹160 ಕೋಟಿ ಮಂಜೂರಾಗಿದೆ. ಕೆ.ಆರ್‌. ಪುರ– ₹40 ಕೋಟಿ, ಬೊಮ್ಮನಹಳ್ಳಿ– ₹65 ಕೋಟಿ, ಬೆಂಗಳೂರು ದಕ್ಷಿಣ– ₹27.25 ಕೋಟಿ ಹಾಗೂ ಯಲಹಂಕ ಮತ್ತು ಬ್ಯಾಟರಾಯನಪುರ ತಲಾ ₹10 ಕೋಟಿ ನೀಡಲಾಗಿದೆ.

ಉಳಿದ ₹33 ಕೋಟಿಯಲ್ಲಿ ನಗರದ 148 ಕೆರೆಗಳಿಗೆ ತೂಬು ಗೇಟ್‌ಗಳನ್ನು ಅಳವಡಿಸಲು ವಿನಿಯೋಗಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಸೂಚಿಸಿದೆ.