ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.
ಮಂಗಳೂರು(Mangalore): ಕುಕ್ಕರ್ ಬಾಂಬ್’ನ ನಟ್ ಬೋಲ್ಟ್ ಹಾಗೂ ಸರ್ಕ್ಯೂಟ್ ಗಳನ್ನು ಆರೋಪಿಯು ಸರಿಯಾಗಿ ಜೋಡಿಸಿದ ಕಾರಣ ಸ್ಫೋಟದ ತೀವ್ರತೆ ಕಡಿಮೆ ಇತ್ತು ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.
ಕುಕ್ಕರ್ ಬಾಂಬ್ ಅನ್ನು ಸರಿಯಾಗಿ ಜೋಡಿಸಿದ್ದರೆ ಆತನೇ ನುಚ್ಚುನೂರಾಗುತ್ತಿದ್ದ. ಇದನ್ನು ರಿಕ್ಷಾದಲ್ಲಿ ಸಾಗಿಸುತ್ತಿದ್ದಾಗ ಅದು ಅರ್ಧಂಬರ್ಧ ಸ್ಫೋಟಗೊಂಡಿದ್ದರಿಂದ ಅನೇಕರ ಪ್ರಾಣ ಹೋಗುವುದು ತಪ್ಪಿತು ಎಂದು ಹೇಳಿದರು.
ಮೊಹಮ್ಮದ್ ಶಾರಿಕ್ ಕುಕ್ಕರ್ ಬಾಂಬ್ ಅನ್ನು ಮೈಸೂರಿನಲ್ಲಿಯೇ ತಯಾರಿಸಿದ್ದಾನೆ. ನಗರದಲ್ಲಿ ಬಾಂಬ್ ಸ್ಪೋಟ ನಡೆಸುವ ಉದ್ದೇಶದಿಂದ ಅದನ್ನು ಬಸ್’ನಲ್ಲೇ ಮಂಗಳೂರಿಗೆ ಸಾಗಿಸಿದ್ದಾನೆ. ಮೈಸೂರಿನ ಬಾಡಿಗೆ ಮನೆಯಲ್ಲಿ ನಟ್, ಬೋಲ್ಟ್, ಸರ್ಕ್ಯೂಟ್ಗಳು, ಬ್ಯಾಟರಿಗಳು, ಆಧಾರ್ ಕಾರ್ಡ್ ಸಿಕ್ಕಿವೆ. 150 ಬೆಂಕಿಪೊಟ್ಟಣಗಳು, ರಂಜಕ, ಗಂಧಕ ಹಾಗೂ ಇತರ ರಾಸಾಯನಿಕಗಳು ಸೇರಿದಂತೆ ಅನೇಕ ಪುರಾವೆಗಳು ಸಿಕ್ಕಿವೆ. ಮಲ್ಟಿ ಫಂಕ್ಷನ್ ಡಿಲೆ ಟೈಮರ್, ಗ್ರೈಂಡರ್, ಮಿಕ್ಸರ್, ಮೆಕ್ಯಾನಿಕಲ್ ಟೈಮರ್, ಆಧಾರ್ ಕಾರ್ಡ್, ಆಲ್ಯೂಮಿನಿಯಂ ಫಾಯಿಲ್, ಸಿಮ್ ಕಾರ್ಡ್ಗಳನ್ನೂ ಅಲ್ಲಿ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಬಾಂಬ್ ತಯಾರಿಸುತ್ತಿದ್ದ ವಿಷಯ ಮನೆಯ ಮಾಲೀಕ ಮೋಹನ್ ಕುಮಾರ್’ಗೆ ಗೊತ್ತಿರಲಿಲ್ಲ. ಮನೆಯಲ್ಲಿ ಆಟಿಕೆಯ ಕೋವಿಯೂ ಪತ್ತೆಯಾಗಿದೆ. ಅದನ್ನೇಕೆ ಇಟ್ಟುಕೊಂಡಿದ್ದ ತಿಳಿದಿಲ್ಲ ಎಂದರು.
ಆರೋಪಿ ಶಾರಿಕ್ ಬಿ.ಕಾಂ. ಪದವೀಧರ. ಕುಕ್ಕರ್ ಬಾಂಬ್ ತಯಾರಿ ಬಗ್ಗೆ ಸಂಪೂರ್ಣ ಪರಿಣತಿ ಆತನಿಗೆ ಇದ್ದಂತೆ ತೋರುತ್ತಿಲ್ಲ. ಅವನು ಸ್ವತಃ ಮೊಬೈಲ್’ಗಳ ಕುರಿತು ತರಬೇತಿ ನೀಡುವವ. ಹಾಗಾಗಿ ಆತ ಮೊಬೈಲ್ ನೋಡಿಯೂ ಕಲಿತಿರಬಹುದು. ಆದರೆ ಅವನು ಅಂದುಕೊಂಡಿದ್ದನ್ನು ಸರಿಯಾಗಿ ಅನುಷ್ಠಾನಗೊಳಿಸಲು ಆತನಿಗೆ ಸಾಧ್ಯವಾಗಿಲ್ಲ ಎಂದು ಎಡಿಜಿಪಿ ತಿಳಿಸಿದರು.
ಪಿಎಫ್’ಐ ನಿಷೇಧ ಮಾಡಿದ್ದಕ್ಕೆ ಪ್ರತೀಕಾರವಾಗಿ ಭಯೋತ್ಪಾದನಾ ಕೃತ್ಯ ನಡೆಸಲಾಗುತ್ತಿದೆ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ. ಹೆಚ್ಚಿನ ತನಿಖೆಯ ಬಳಿಕವಷ್ಟೇ ಈ ಬಗ್ಗೆ ಮಾಹಿತಿ ನೀಡಬಹುದು. ನಗರಕ್ಕೆ ಮುಖ್ಯಮಂತ್ರಿ ಭೇಟಿಗೂ ಈ ಘಟನೆಗೂ ಸಂಬಂಧ ಇದ್ದಂತೆ ತೋರುತ್ತಿಲ್ಲ.ಆರೋಪಿ ನ.10ರಂದು ನಗರಕ್ಕೆ ಬಂದು ಹೋಗಿದ್ದ. ಆತ ಬಾಂಬ್ ಇಡಲು ಸ್ಥಳ ನೋಡಿ ಹೋಗಿರಬಹುದು ಎಂದರು.
ಸದ್ಯಕ್ಕೆ ಕರ್ನಾಟಕದ ಪೊಲೀಸರೇ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ವಿವಿಧ ತನಿಖಾ ಏಜೆನ್ಸಿಗಳ ನೆರವನ್ನೂ ಪಡೆಯುತ್ತಿದ್ದೇವೆ ಎಂದು ಅವರು ತಿಳಿಸಿದರು.