ಮನೆ ಸುದ್ದಿ ಜಾಲ `ಸವಾಲ್ ಟಿವಿ’ ವರದಿ ಫಲಶ್ರುತಿ: ರಸ್ತೆ ಬದಿ ಹಾಕಿದ್ದ ಮಣ್ಣು, ಕಸ ತೆರವುಗೊಳಿಸಿದ ಪಾಲಿಕೆ

`ಸವಾಲ್ ಟಿವಿ’ ವರದಿ ಫಲಶ್ರುತಿ: ರಸ್ತೆ ಬದಿ ಹಾಕಿದ್ದ ಮಣ್ಣು, ಕಸ ತೆರವುಗೊಳಿಸಿದ ಪಾಲಿಕೆ

0

ಮೈಸೂರು: `ಹಿಂದೂ ಧರ್ಮದ ವ್ಯಾಪಾರಿಗಳನ್ನು ಗುರಿಯಾಗಿಸಿ ಕಾರ್ಪೋರೇಟರ್ ರೇಷ್ಮಾ ಬಾನು ದಬ್ಬಾಳಿಕೆ: ಸೂಕ್ತ ಕ್ರಮಕ್ಕೆ ಆಗ್ರಹ’ ಶೀರ್ಷಿಕೆಯಡಿ ನಿನ್ನೆ(ಗುರುವಾರ) ಸವಾಲ್ ವೆಬ್’ಸೈಟ್ ಹಾಗೂ `ಸವಾಲ್ ಟಿವಿ’ ಯೂಟ್ಯೂಬ್ ಚಾನಲ್ ನಲ್ಲಿ ಪ್ರಕಟಗೊಂಡಿದ್ದ ಸುದ್ದಿಗೆ ಫಲಶ್ರತಿ ದೊರೆತಿದೆ.

ನಗರದ 17ನೇ ವಾರ್ಡ್’ನ ಕಾರ್ಪೊರೇಟರ್ ರೇಷ್ಮಾಬಾನು ಅವರಿಗೆ ರಸ್ತೆ ಬದಿ ವ್ಯಾಪಾರ ಮಾಡುವ ಹಿಂದೂ ವ್ಯಾಪಾರಿಗಳು 10 ಸಾವಿರ ರೂ. ನೀಡದ್ದಕ್ಕೆ ವ್ಯಾಪಾರ ನಡೆಸುವ ಸ್ಥಳದಲ್ಲಿ ಹಾಕಿಸಿದ್ದ ಮಣ್ಣು, ಕಸವನ್ನು ಇಂದು ಮೈಸೂರು ಮಹಾನಗರ ಪಾಲಿಕೆಯ ಪೌರ ಕಾರ್ಮಿಕ ಸಿಬ್ಬಂದಿ ಇಂದು ತೆರವುಗೊಳಿಸಿದ್ದಾರೆ.

ಹೈವೇ ವೃತ್ತದ ಬಳಿ ಪುತ್ಥಳಿ ಪಾರ್ಕ್ ಮುಂಭಾಗ ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುವ ಹಿಂದೂ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು  17ನೇ ವಾರ್ಡ್’ನ ಪಾಲಿಕೆ ಸದಸ್ಯೆ ರೇಷ್ಮಾ ಬಾನು ತಿಂಗಳಿಗೆ 10 ಸಾವಿರ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ. ಹಣ ಕೊಡದಿದ್ದಕ್ಕೆ ರಸ್ತೆಗೆ ಮಣ್ಣು ಹಾಕಿಸಿ ವ್ಯಾಪಾರಿಗಳಿಗೆ ತೊಂದರೆ ನೀಡುತ್ತಿರುವುದು ಮಾತ್ರವಲ್ಲದೇ ಸ್ವಚ್ಛ ನಗರಿ ಖ್ಯಾತಿಯ ಮೈಸೂರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಎ.ಎಚ್.ಪಿ.ರಾಷ್ಟ್ರೀಯ ಭಜರಂಗ ದಳದ ಜಿಲ್ಲಾಧ್ಯಕ್ಷ ಲೋಕೇಶ್ ಕೆ  ಪತ್ರ ಬರೆದಿದ್ದರು.

ಅಲ್ಲದೇ ಸಂವಿಧಾನಕ್ಕೆ ವಿರುದ್ಧವಾಗಿ ವರ್ತಿಸುತ್ತಿರುವ ಪಾಲಿಕೆ ಸದಸ್ಯೆ ರೇಷ್ಮಾಬಾನು, ಅವರ ಸಂಗಡಿಗರಾದ ನಾಸೀರ್ ಮತ್ತು ಮುಬಾರಕ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ, ಉಗ್ರ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದ್ದರು.

ಈ ಘಟನೆ ಕುರಿತು `ಸವಾಲ್ ವೆಬ್’ಸೈಟ್ ಹಾಗೂ ಯೂಟ್ಯೂಬ್ ಚಾನೆಲ್’ ನಲ್ಲಿ ಸುದ್ದಿ ಪ್ರಸಾರವಾಗಿತ್ತು.  ಇದರ ಬೆನ್ನಲ್ಲೆ ಇಂದು ಪಾಲಿಕೆಯ ಪೌರ ಕಾರ್ಮಿಕ ಸಿಬ್ಬಂದಿ ಇಂದು ಸ್ಥಳದಲ್ಲಿದ್ದ ಮಣ್ಣು ಹಾಗೂ ಕಸ ತೆರವುಗೊಳಿಸಿ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.