ಮನೆ ಸುದ್ದಿ ಜಾಲ ಹೊಸ ವರ್ಷಾಚರಣೆ : ಕಾವೇರಿ ನದಿ ತೀರ ಪ್ರದೇಶಕ್ಕೆ ಪ್ರವಾಸಿಗರ ನಿರ್ಬಂಧ

ಹೊಸ ವರ್ಷಾಚರಣೆ : ಕಾವೇರಿ ನದಿ ತೀರ ಪ್ರದೇಶಕ್ಕೆ ಪ್ರವಾಸಿಗರ ನಿರ್ಬಂಧ

0

ಮಂಡ್ಯ(Mandya): ಹೊಸ ವರ್ಷದ ಸಂಭ್ರಮಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ನಡುವೆ ಕಾವೇರಿ ನದಿ ತೀರ ಪ್ರದೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.

ಶ್ರೀರಂಗಪಟ್ಟಣ ತಹಶೀಲ್ದಾರ್ ಶ್ವೇತಾ ಆದೇಶ ಹೊರಡಿಸಿದ್ದು, ಹೊಸ ವರ್ಷಾಚರಣೆ ಎಂದು ಬಲಮುರಿ, ಎಡಮುರಿ, ಕೆಆರ್ ಎಸ್ ಹಿನ್ನೀರಿನಲ್ಲಿ ಯಾವುದೇ ಮೋಜು ಮಸ್ತಿ ಮಾಡುವಂತಿಲ್ಲ. ಇಂದು ಬೆಳಿಗ್ಗೆ 6 ರಿಂದ ಜನವರಿ 2ರವರೆಗೆ ಪ್ರವಾಸಿಗರಿಗೆ  ನಿರ್ಬಂಧ ವಿಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.