ಮನೆ ಸುದ್ದಿ ಜಾಲ ಪಿರಿಯಾಪಟ್ಟಣ: ಹಾಡಿಯಲ್ಲಿ ಮತದಾನ ಕುರಿತು ಜಾಗೃತಿ

ಪಿರಿಯಾಪಟ್ಟಣ: ಹಾಡಿಯಲ್ಲಿ ಮತದಾನ ಕುರಿತು ಜಾಗೃತಿ

0

ಪಿರಿಯಾಪಟ್ಟಣ: ಮತದಾನ ನಮ್ಮ ಹಕ್ಕು. ಅದನ್ನು ಯಾವುದೇ ರೀತಿಯ ಆಮಿಷಗಳಿಗೆ ಮಾರಿಕೊಳ್ಳಬಾರದು. ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಉತ್ತಮ ಅಭ್ಯರ್ಥಿಯನ್ನು ಆಯ್ಕೆಮಾಡಿ ಎಂದು ಚೌತಿ ಗ್ರಾಮಪಂಚಾಯಿತಿ ಪಿಡಿಓ ಎಂ.ಎಚ್.ಮೋಹನ್‌ಕುಮಾರ್ ಹೇಳಿದರು.

Join Our Whatsapp Group

ತಾಲ್ಲೂಕಿನ ಚೌತಿ ಗ್ರಾಮಪಂಚಾಯಿತಿ ವ್ಯಾಪ್ತಿಯ ವರ್ತಿ ಹಾಡಿಯಲ್ಲಿ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಹಾಡಿ ಜನರಿಗೆ ಮತದಾನ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಗುರುವಾರ ಚುನಾವಣಾ ಪ್ರಚಾರ ವಾಹನದ ಮೂಲಕ ಅರಿವು ಮೂಡಿಸಲಾಯಿತು.

ಈ ಸಂದರ್ಭ ಹಾಡಿ ಜನರಿಗೆ ಪ್ರತಿಜ್ಞಾವಿಧಿ ಬೋಧಿಸಿದ ಪಿಡಿಓ  ಅವರು, ಐದು ವರ್ಷಕ್ಕೊಮ್ಮೆ ಮಾತ್ರ ನಮ್ಮ ಅಭಿವೃದ್ಧಿಗಾಗಿ ಶ್ರಮಿಸುವಂತಹ ಮುಖಂಡನನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಹೀಗಾಗಿ, ಈ ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ ಎಂದರು.

ಶೈಕ್ಷಣಿಕ,ಆರ್ಥಿಕ,ಸಾಮಾಜಿಕ ಅಭಿವೃದ್ಧಿಗಾಗಿ ಶ್ರಮಿಸುವಂತಹ ಅಭ್ಯರ್ಥಿಗೆ ಮತ ನೀಡಿ. ನೀವು ಕಡ್ಡಾಯವಾಗಿ ಮತದಾನ ಮಾಡುವುದಲ್ಲದೇ, ಸುತ್ತಮುತ್ತಲಿನವರಿಗೂ ಮತದಾನ ಮಾಡುವಂತೆ ಸಲಹೆ ನೀಡಿ ಎಂದು ಹೇಳಿದರು.

ಈ ಸಂದರ್ಭ ತಾಲ್ಲೂಕು ಐಇಸಿ ಸಂಯೋಜಕ ಡಿ.ರವಿಕುಮಾರ್, ಬಿಎಫ್‌ಟಿ ಪ್ರಸನ್ನ ಇತರರು ಇದ್ದರು.