ಮನೆ ರಾಜಕೀಯ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ರಾಮದಾಸ್ ಮೆಚ್ಚುಗೆ

ಪ್ರಧಾನಿ ನರೇಂದ್ರ ಮೋದಿ ಬಗ್ಗೆ ರಾಮದಾಸ್ ಮೆಚ್ಚುಗೆ

0

ಮೈಸೂರು : ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕಕ್ಕೆ ಏನೆಲ್ಲಾ ಪ್ರಯೋಜನಗಳು ಆಗಲಿವೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ಧಾರೆ ಎಂದು ಶಾಸಕ ಎಸ್‌ ಎ ರಾಮದಾಸ್ ಹೇಳಿದ್ದಾರೆ.

Join Our Whatsapp Group

ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೆ ಆರ್ ಕ್ಷೇತ್ರ ಸಂಘಟನೆಯಲ್ಲಿ ಮೊದಲ ಸ್ಥಾನದಲ್ಲಿರುವುದನ್ನು ಪ್ರಧಾನಿ ಮೋದಿ ಉಲ್ಲೇಖಿಸಿದ್ದು ಸಂತಸ ತಂದಿದೆ ಎಂದರು.

ಕೆ ಆರ್ ಕ್ಷೇತ್ರದಲ್ಲಿ ಕಳೆದೊಂದು ವರ್ಷದಿಂದ ಬೂತ್ ಮಟ್ಟದಲ್ಲಿ ಆಲ್ ಓಟ್ಸ್ ಬಿಜೆಪಿ ಓಟ್ಸ್, ಆಲ್ ಬೂತ್ಸ್ ಬಿಜೆಪಿ ಬೂತ್ಸ್ ಎಂಬ ಗುರಿಯೊಂದಿಗೆ ಕೆಲಸ ಮಾಡಿದ್ದೇವೆ. ಕೆ ಆರ್ ಕ್ಷೇತ್ರದ 265 ಬೂತ್ ಗಳ ಪೈಕಿ 226 ಬೂತ್ ಗಳು ಬಿಜೆಪಿ ಬೂತ್’ಗಳಾಗಿವೆ. ಈ ಹಿಂದೆಯೇ ಹೇಳಿರುವಂತೆ ಈ ಬಾರಿಯ ಚುನಾವಣೆಯಲ್ಲಿ 50 ಸಾವಿರ ಮತಗಳ ಅಂತರದಿಂದ ಕೆ ಆರ್ ಕ್ಷೇತ್ರವನ್ನು ನಾವು ಗೆಲ್ಲುತ್ತೇವೆ‌ ಎಂದು ಹೇಳಿದರು.