ಮನೆ ಅಪರಾಧ ಗಂಜಾಂನಲ್ಲಿ ಅಪ್ರಾಪ್ತ ಬಾಲಕಿ ವಿವಾಹ ತಡೆದ ಅಧಿಕಾರಿಗಳು

ಗಂಜಾಂನಲ್ಲಿ ಅಪ್ರಾಪ್ತ ಬಾಲಕಿ ವಿವಾಹ ತಡೆದ ಅಧಿಕಾರಿಗಳು

0

ಶ್ರೀರಂಗಪಟ್ಟಣ:ಅಪ್ರಾಪ್ತ ವಯಸಿನ ಬಾಲಕಿ ವಿವಾಹ ನಡೆಸುತ್ತಿದ್ದುದ್ದನ್ನು ಮಾಹಿತಿ ತಿಳಿದ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳು ವಿವಾಹವನ್ನು ತಡೆದಿದ್ದಾರೆ.

Join Our Whatsapp Group


ಪಟ್ಟಣ ಪುರಸಭೆ ವ್ಯಾಪ್ತಿಯ ಗಂಜಾಂನಲ್ಲಿ ಸರ್ದಾರ್‌ಖಾನ್ ಮಸೀದಿಯಲ್ಲಿ ಘಟನೆ ನಡೆದಿದ್ದು, ಇಲಾಖೆಯ ಅಧಿಕಾರಿ ಅಮೃತ ನೇತೃತ್ವದಲ್ಲಿ ಬಾಲ್ಯ ವಿವಾಹದ ಕಾಯಿದೆಗಳ ಬಗ್ಗೆ ಪೋಷಕರಿಗೆ ತಿಳಿ ಹೇಳಿ,ವಿವಾಹ ನಡೆಸದಂತೆ ಬಾಲಕಿಯ ತಂದೆ ತಾಯಿಗಳಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ. ಗಂಜಾಂ ಗ್ರಾಮದ ಮುಸ್ಲೀಂ ನಿವಾಸಿಗಳಾದ ಬಾಲಕಿ ತಂದೆ ತಾಯಿಗಳು ತಮ್ಮ ಬಾಲಕಿಗೆ ೧೬ ವರ್ಷ ತುಂಬಿರುವ ವೇಳೆ ೨೩ ವರ್ಷದ ಯುವಕನೊಂದಿಗೆ ವಿವಾಹ ನೆರವೇರಿಸಿದ್ದಾರೆ.

ಗಂಜಾಂನ ಸರ್ದಾರ್‌ಖಾನ್ ಮಸೀದಿಯಲ್ಲಿ ವಿವಾಹ ಹಮ್ಮಿಕೊಂಡಿರುವ ವಿಷಯ ಸ್ಥಳಿಯರಿಂದ ಮಾಹಿತಿ ಪಡೆದ ಅಧಿಕಾರಿಗಳು ಪೊಲೀಸರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಬಾಲಕಿ ತಂದೆ ತಾಯಿಗಳಿಗೆ ಬುದ್ದಿ ತಿಳಿವಳಿಕೆ ನೀಡಿ ಇನ್ನು ಮುಂದೆ ಇಂತಹ ಕಾರ್ಯಕ್ಕೆ ಕೈ ಹಾಕಬೇಡಿ ಎಂದು ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ.