ಸಾಮಾಜಿಕ ನ್ಯಾಯಕ್ಕಾಗಿ ಸುಧಾರಣೆ ತರಲು ಬಯಸುವ ವಕೀಲರು ಪ್ರಚಾರ ಹಿತಾಸಕ್ತಿಯ ಮೊಕದ್ದಮೆಗಳಿಗಿಂತಲೂ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಸಲ್ಲಿಸಬೇಕು ಎಂದು ಹಿರಿಯ ವಕೀಲ ಹಾಗೂ ನಾಮನಿರ್ದೇಶಿತ ರಾಜ್ಯಸಭಾ ಸದಸ್ಯ ಮಹೇಶ್ ಜೇಠ್ಮಲಾನಿ ಅವರು ವಕೀಲರಿಗೆ ಸೋಮವಾರ ಸಲಹೆ ನೀಡಿದರು.
ನೀತಿ ನಿರೂಪಣೆಯಲ್ಲಿ ಯುವಜನರ ಪಾತ್ರ ಕುರಿತಂತೆ ವೈ 20 ಸಂವಾದ ಸರಣಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು. ಆತ್ಮಸಾಕ್ಷಿ ನುಡಿದಂತೆ ನಡೆಯುವುದು ವಕೀಲರ ಪ್ರಮುಖ ಕರ್ತವ್ಯವಾಗಬೇಕು ಎಂದು ಜೇಠ್ಮಲಾನಿ ಒತ್ತಿ ಹೇಳಿದರು.
“ದೇಶದ ವಿವಿಧ ವಕೀಲ ವರ್ಗಗಳಲ್ಲಿ ಫಿಕ್ಸರ್’ಗಳ (ಗೆಲುವಿಗೆ ಅಕ್ರಮವಾಗಿ ಲಾಬಿ ಮಾಡುವವರು) ಗುಂಪು ನಾಯಿಕೊಡೆಯಂತೆ ತಲೆಎತ್ತಿದೆ. ಪ್ರಕರಣ ಗೆಲ್ಲಬೇಕಾದರೆ ನ್ಯಾಯಾಧೀಶರನ್ನು ಅರಿತಿರಬೇಕೆ ವಿನಾ ಕಾನೂನನಲ್ಲ ಎಂದು ಆ ಫಿಕ್ಸರ್’ಗಳು ಯೋಚಿಸಿದಂತಿದೆ. ವಕೀಲರು ನಯವಾಗಿ ತಪ್ಪುಗಳನ್ನು ಎತ್ತಿ ತೋರಿಸಬೇಕು ಮತ್ತು ಟೀಕಿಸಬೇಕು. ಆತ್ಮಸಾಕ್ಷಿ ನುಡಿದಂತೆ ನಡೆಯುವುದು ವಕೀಲರ ಆತ್ಯಂತಿಕ ಕರ್ತವ್ಯವಾಗಬೇಕು. ನೀವು ಬಯಸಿದರೆ ಸುಧಾರಕರಾಗಿ ಅಥವಾ ಸಾಮಾಜಿಕ ನ್ಯಾಯಕ್ಕಾಗಿ, ಪಿಐಎಲ್’ಗಳನ್ನು ಸಲ್ಲಿಸಿ. ತಮ್ಮ ಪಿಐಎಲ್’ಗಳಿಂದ ಕಾನೂನು ರೂಪುಗೊಳ್ಳುವಂತಹ ಹಲವು ತೀರ್ಪುಗಳನ್ನು ಪಡೆಯುವುದು ಅನೇಕ ವಕೀಲರ ಕನಸು. ಹಾಗೆಂದು ಪ್ರಚಾರದ ಹಿತಾಸಕ್ತಿ ಮೊಕದ್ದಮೆಗಳನ್ನು ಸಲ್ಲಿಸದಿರಿ. ಬದಲಿಗೆ ಸಮಾಜಕ್ಕೆ ಸೇವೆ ಸಲ್ಲಿಸಲು ಕಾನೂನು ಸೇವೆಯ ಕೆಲಸ ಮಾಡಬಹುದು ಲೇಖನಗಳನ್ನು ಬರೆಯಬಹುದು ಇಲ್ಲವೇ ಪಾಠ ಮಾಡಬಹುದು” ಎಂದು ಅವರು ಕಿವಿಮಾತು ಹೇಳಿದರು.
ಹಿಂದೆ ಭಾರತದ ಸಂವಿಧಾನ ರಚನಾ ಸಭೆಯಲ್ಲಿ 348 ಸದಸ್ಯರಲ್ಲಿ 250 ಮಂದಿ ವಕೀಲರೇ ಇದ್ದರು. ಈಗ ಕಾನೂನು ಹಿನ್ನೆಲೆ ಇರುವ ಶೇ 4 ರಷ್ಟು ಸಂಸದರು ಮಾತ್ರ ಇದ್ದಾರೆ. ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ಅವರು ತಮ್ಮ ತಂದೆ ರಾಮ್ ಜೇಠ್ಮಲಾನಿ ಅವರ ಮಾತೊಂದನ್ನು ಪ್ರಸ್ತಾಪಿಸುತ್ತಾ “ಪ್ರಕರಣ ಕಳೆದುಕೊಂಡರೂ ಕಕ್ಷಿದಾರರನ್ನು ಕಳೆದುಕೊಳ್ಳಬಾರದು. ಕಕ್ಷಿದಾರರನ್ನು ಕಳೆದುಕೊಂಡರೂ ನ್ಯಾಯಾಲಯವನ್ನು ಕಳೆದುಕೊಳ್ಳಬಾರದು. ಅದನ್ನು ಕಳೆದುಕೊಂಡರೂ ನಿಮ್ಮ ಆತ್ಮಸಾಕ್ಷಿ ಕಳೆದುಕೊಳ್ಳಬಾರದು” ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.