ಯೋಗಾಮುದ್ರಾಸನ ಕುಂಡಲಿನೀ ಶಕ್ತಿಯನ್ನು ವಿಶೇಷವಾಗಿ ಉದ್ದೀಪನಗೊಳಿಸುವುದರಲ್ಲಿ ಸಹಕಾರಿ ಅಲ್ಲದೆ ಧ್ಯಾನಕ್ಕೂ ಉತ್ತಮವಾದುದು.
ಮಾಡುವ ಕ್ರಮ
ಯೋಗಾಭ್ಯಾಸಿಯು ಎದೆಯೆತ್ತಿ, ನೇರವಾಗಿ ಮೊದಲು ಪದ್ಮಾಸನದಲ್ಲಿ ಕುಳಿತುಕೊಳ್ಳಬೇಕು. ಆನಂತರ ಎರಡೂ ಕೈಗಳನ್ನು ಬೆನ್ನಿನ ಮೇಲೆ ಒಂದು ಇನ್ನೊಂದನ್ನು ಛೇದಿಸುವಂತೆ ಇಡಬೇಕು ಮತ್ತು ಅದೇ ಸ್ಥಿತಿಯಲ್ಲಿ ಎಡಗೈಯಿಂದ ಎಡ ಗಾಲಿನ ಹೆಬ್ಬೆರಳನ್ನೂ, ಬಲಗೈಯಿಂದ ಬಲಗಾಲಿನ ಹೆಬ್ಬೆರಳನ್ನೂ ಹಿಡಿಯಬೇಕು. ಒಮ್ಮೆ ದೀರ್ಘವಾಗಿ ಉಸಿರನ್ನು ತೆಗೆದುಕೊಂಡು ನಿಧನವಾಗಿ ಉಸಿರನ್ನು ಹೊರಕ್ಕೆ ಬಿಡುತ್ತಾ ಮುಂದಕ್ಕೆ ಚಿತ್ರದಲ್ಲಿ ತೋರಿಸುವಂತೆ ಬಾಗಬೇಕು. ಒಮ್ಮೆ ಬಗ್ಗಿದನಂತರ ಆ ಸ್ಥಿತಿಯಲ್ಲಿ ಅತಿ ನಿಧನವಾಗಿ ಉಸಿರಾಡಬೇಕು. ಈ ಸ್ಥಿತಿಯಲ್ಲಿ ಪೃಷ್ಠಭಾಗ, ಕಾಲಿನ ತೊಡೆಗಳು ಮತ್ತು ಹಣೆ ನೆಲದ ಮೇಲೆ ಇರುತ್ತವೆ. ಈ ಸ್ಥಿತಿಯಲ್ಲೇ ಸಮತೋಲನವನ್ನು ಪಡೆಯಲು ಸಾಧ್ಯ. ಪೃಷ್ಠಭಾಗವು ನೆಲದಲ್ಲಿದ್ದರೆ ಯೋಗಾಭ್ಯಾಸಿಯು ಪಕ್ಕಕ್ಕೆ ವಾಲುವ ಸಂಭವವಿದೆ. ಮೂರರಿಂದ ಐದು ನಿಮಿಷಗಳವರೆಗೆ ಯೋಗಮುದ್ರಾಸನದಲ್ಲಿದ್ದು ಅನಂತರ ಕಾಲುಗಳನ್ನು ಬದಲಾಯಿಸಬೇಕು.
ಲಾಭಗಳು: ಈ ಆಸನವು ವಿಶೇಷವಾಗಿ ಕೈ, ಕಾಲು, ಹೊಟ್ಟೆ, ಸೊಂಟ ಮುಂತಾದ ಶರೀರದ ಅವಯವಗಳಿಗೆ ಹೆಚ್ಚಿನ ವ್ಯಾಯಾಮವನ್ನು ಒದಗಿಸುತ್ತದೆ. ಎದೆ ಮತ್ತು ಶ್ವಾಸಕೋಶಗಳು ಸಾಕಷ್ಟು ಬಲಿಷ್ಠವಾಗುವವು. ವಿಶೇಷವಾಗಿ ಮಲಬದ್ಧತೆಯು ನಿವಾರಣೆಯಾಗುವುದರೊಂದಿಗೆ ಜೀರ್ಣಶಕ್ತಿಯೂ ಹೆಚ್ಚುವುದು. ಮೂಳೆರೋಗಿಗಳಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.