ಮನೆ ಅಂತಾರಾಷ್ಟ್ರೀಯ ಭಾರತ ಬೆಳೆದರೆ ಇಡೀ ಜಗತ್ತು ಬೆಳೆಯುತ್ತದೆ: ಯುಎಸ್ ಜಂಟಿ ಅಧಿವೇಶನದಲ್ಲಿ ಪ್ರಧಾನಿ ಮೋದಿ ಹೇಳಿಕೆ

ಭಾರತ ಬೆಳೆದರೆ ಇಡೀ ಜಗತ್ತು ಬೆಳೆಯುತ್ತದೆ: ಯುಎಸ್ ಜಂಟಿ ಅಧಿವೇಶನದಲ್ಲಿ ಪ್ರಧಾನಿ ಮೋದಿ ಹೇಳಿಕೆ

0

ವಾಷಿಂಗ್ಟನ್ ಡಿಸಿ: ನಾನು ಪ್ರಧಾನಿಯಾಗಿ ಮೊದಲ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡಿದಾಗ ಭಾರತವು ವಿಶ್ವದ 10ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು. ಇಂದು ಭಾರತವು 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಭಾರತ ಶೀಘ್ರದಲ್ಲೇ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಭಾರತ ಬೆಳೆದರೆ ಇಡೀ ಜಗತ್ತು ಬೆಳೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಯುಎಸ್ ಜಂಟಿ ಅಧಿವೇಶನದಲ್ಲಿ ಹೇಳಿದರು.

Join Our Whatsapp Group

ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಅಮೆರಿಕ ಕಾಂಗ್ರೆಸ್‌ ನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದರು.ಇದು ಜಂಟಿ ಸಭೆಯನ್ನುದ್ದೇಶಿಸಿ ಅವರ ಎರಡನೇ ಭಾಷಣವಾಗಿದ್ದು, ಮೊದಲ ಭಾಷಣ ಜೂನ್ 2016 ರಲ್ಲಿ ಮಾಡಿದ್ದರು.

 “ಯುಎಸ್ ಕಾಂಗ್ರೆಸ್ ನಲ್ಲಿ ಮಾತನಾಡುವುದು ಗೌರವ ಅದರಲ್ಲೂ ಎರಡು ಬಾರಿ ಈ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ” ಎಂದು ಮೋದಿ ಆರಂಭದಲ್ಲಿ ಹೇಳಿದರು.

ಕಳೆದ ಏಳು ವರ್ಷಗಳಲ್ಲಿ ಬಹಳಷ್ಟು ಬದಲಾಗಿದೆ, ಆದರೆ ಭಾರತ ಮತ್ತು ಯುಎಸ್ ನಡುವಿನ ಸ್ನೇಹವನ್ನು ಗಾಢಗೊಳಿಸುವ ಬದ್ಧತೆ ಒಂದೇ ಆಗಿರುತ್ತದೆ. AI ಯುಗದಲ್ಲಿ, ಮತ್ತೊಂದು AI (ಅಮೆರಿಕಾ-ಭಾರತ) ಹೆಚ್ಚಿನ ಬೆಳವಣಿಗೆಗಳನ್ನು ಕಂಡಿದೆ ಎಂದು ಮೋದಿ ಹೇಳಿದರು.

ನಾನು ವೈಬ್ರೆಂಟ್ ಪ್ರಜಾಪ್ರಭುತ್ವದ ಪ್ರಜೆಯಾಗಿ, ನಾನು ಒಂದು ವಿಷಯವನ್ನು ಒಪ್ಪಿಕೊಳ್ಳಬಲ್ಲೆ. ಮಿಸ್ಟರ್ ಸ್ಪೀಕರ್ – ನಿಮಗೆ ಕಠಿಣ ಕೆಲಸವಿದೆ. ವಿಚಾರಗಳು ಮತ್ತು ಸಿದ್ಧಾಂತದ ಚರ್ಚೆಯನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ನಿಮಗೆ ಬಲವಾದ ಉಭಯಪಕ್ಷೀಯ ಒಮ್ಮತದ ಅಗತ್ಯವಿದ್ದೆ ಸಹಾಯ ಬೇಕಾದರೆ ಸಂತೋಷದಿಂದ ನಾನು ಮಾಡಬಲ್ಲೆ ಎಂದರು.

ಪ್ರಜಾಪ್ರಭುತ್ವ, ಒಳಗೊಳ್ಳುವಿಕೆ ಮತ್ತು ಸುಸ್ಥಿರತೆಯ ಮನೋಭಾವವು ನಮ್ಮನ್ನು ವ್ಯಾಖ್ಯಾನಿಸುತ್ತದೆ. ಇದು ಜಗತ್ತಿಗೆ ನಮ್ಮ ದೃಷ್ಟಿಕೋನವನ್ನು ಸಹ ರೂಪಿಸುತ್ತದೆ. ಭಾರತವು ನಮ್ಮ ಗ್ರಹದ ಬಗ್ಗೆ ಜವಾಬ್ದಾರಿ ಹೊಂದಿದೆ. ಭಾರತೀಯ ಸಂಸ್ಕೃತಿಯು ಪರಿಸರ ಮತ್ತು ನಮ್ಮ ಗ್ರಹವನ್ನು ಆಳವಾಗಿ ಗೌರವಿಸುತ್ತದೆ. ನಮ್ಮ ದೃಷ್ಟಿ ಗ್ರಹ ಪ್ರಗತಿ ಪರವಾಗಿದೆ, ನಮ್ಮ ದೃಷ್ಟಿ ಗ್ರಹದ ಸಮೃದ್ಧಿಯ ಪರವಾಗಿದೆ ಎಂದರು.

ಉಕ್ರೇನ್ ಸಂಘರ್ಷದೊಂದಿಗೆ ಯುರೋಪ್ ಗೆ ಯುದ್ಧ ಮರಳಿದೆ. ಇದು ಪ್ರದೇಶದಲ್ಲಿ ತೀವ್ರ ನೋವನ್ನು ಉಂಟುಮಾಡುತ್ತದೆ. ಇದು ಪ್ರಮುಖ ಶಕ್ತಿಗಳನ್ನು ಒಳಗೊಂಡಿರುವುದರಿಂದ, ಪರಿಣಾಮಗಳು ತೀವ್ರವಾಗಿರುತ್ತವೆ. ನಾನು ಹೇಳಿದಂತೆ, ಇದು ಯುದ್ಧದ ಯುಗವಲ್ಲ. ಇದು ಮಾತುಕತೆ ಮತ್ತು ರಾಜತಾಂತ್ರಿಕತೆಯ ಯುಗ ಎಂದು ಅತಿ ದೊಡ್ಡ ಪ್ರಜಾಪ್ರಭುತ್ವದ ಪ್ರಧಾನಿ ಪರೋಕ್ಷವಾಗಿ ನುಡಿದರು.

ಮುಂಬೈನಲ್ಲಿ 9/11 ರ ನಂತರ ಎರಡು ದಶಕಗಳಿಗೂ ಹೆಚ್ಚು ಮತ್ತು 26/11 ರ ನಂತರ ಒಂದು ದಶಕಕ್ಕೂ ಹೆಚ್ಚು ಕಾಲವಾದರೂ, ತೀವ್ರಗಾಮಿತ್ವ ಮತ್ತು ಭಯೋತ್ಪಾದನೆ ಇನ್ನೂ ಜಗತ್ತಿಗೆ ಅಪಾಯಕಾರಿಯಾಗಿದೆ. ಈ ಸಿದ್ಧಾಂತಗಳು ಹೊಸ ಗುರುತುಗಳನ್ನು ತೆಗೆದುಕೊಳ್ಳುತ್ತಲೇ ಇರುತ್ತವೆ ಮತ್ತು ಅವುಗಳ ಉದ್ದೇಶಗಳು ಒಂದೇ ಆಗಿರುತ್ತವೆ. ಭಯೋತ್ಪಾದನೆಯು ಮಾನವೀಯತೆಯ ಶತ್ರುವಾಗಿದೆ ಮತ್ತು ಅದರೊಂದಿಗೆ ವ್ಯವಹರಿಸುವಾಗ ‘ಒಂದು ವೇಳೆ’ ಮತ್ತು ‘ಆದರೆ’ ಬರುವಂತಿಲ್ಲ ಎಂದರು.

ನಾವು ಸಾಂಕ್ರಾಮಿಕ ರೋಗದಿಂದ ಹೊರಬಂದಂತೆ, ನಾವು ಹೊಸ ವಿಶ್ವ ಕ್ರಮಕ್ಕೆ ಆಕಾರವನ್ನು ನೀಡಬೇಕು. ಅದಕ್ಕಾಗಿಯೇ ಆಫ್ರಿಕನ್ ಯೂನಿಯನ್‌ ಗೆ G20 ನ ಪೂರ್ಣ ಸದಸ್ಯತ್ವವನ್ನು ನೀಡಲಾಗುವುದು ಎಂದು ನಾನು ದೃಢವಾಗಿ ನಂಬುತ್ತೇನೆ. ನಾವು ಬಹುಪಕ್ಷೀಯತೆಯನ್ನು ಪುನರುಜ್ಜೀವನಗೊಳಿಸಬೇಕು ಮತ್ತು ಬಹುಪಕ್ಷೀಯ ಸಂಸ್ಥೆಗಳನ್ನು ಸುಧಾರಿಸಬೇಕು. ಜಗತ್ತು ಬದಲಾದಾಗ ನಾವೂ ಬದಲಾಗಬೇಕು ಎಂದು ಪ್ರಧಾನಿ ಮೋದಿ ಹೇಳಿದರು.