ಮನೆ ಅಪರಾಧ ಕೊಲೆ ಯತ್ನ ಪ್ರಕರಣ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರೋಪಿ ಬಂಧನ

ಕೊಲೆ ಯತ್ನ ಪ್ರಕರಣ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರೋಪಿ ಬಂಧನ

0

ಬೆಂಗಳೂರು: ವೈಷ್ಣವಿ ಬಿಲ್ಡರ್ಸ್ ಮಾಲೀಕ ಗೋವಿಂದರಾಜು ಪುತ್ರ ದರ್ಶನ್ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದ ಆರೋಪದಡಿ ವೇದಾಂತ್ ದುಗಾರ್ ನನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

Join Our Whatsapp Group

ಆರ್. ಟಿ. ನಗರ ಠಾಣೆ ವ್ಯಾಪ್ತಿಯಲ್ಲಿ ದರ್ಶನ್ ಮೇಲೆ ಮೇ 9ರಂದು ಹಲ್ಲೆ ನಡೆದಿತ್ತು. ನಂತರ ನಾಪತ್ತೆಯಾಗಿದ್ದ ವೇದಾಂತ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ವೇಳೆ ಬಂಧಿಸಲಾಗಿದೆ.

ಆರೋಪಿ ವೇದಾಂತ್, ವಿಎಆರ್ ಬಿಲ್ಡರ್ಸ್ ಮಾಲೀಕ ಸಂಜಯ್  ಅವರ ಪುತ್ರ. ಈತ ಹಾಗೂ ದರ್ಶನ್ ಹಲವು ವರ್ಷಗಳ ಸ್ನೇಹಿತರು. ಮದುವೆಯೊಂದಕ್ಕೆ ಇಬ್ಬರೂ ಪ್ರತ್ಯೇಕವಾಗಿ ಹೋಗಿದ್ದರು. ತನ್ನನ್ನು ಹೆಚ್ಚು ಮಾತನಾಡಿಸಲಿಲ್ಲ ಎಂದು ಜಗಳ ತೆಗೆದಿದ್ದ ಆರೋಪಿ ಮದ್ಯದ ಬಾಟಲಿಯಿಂದ ದರ್ಶನ್ ತಲೆಗೆ ಹೊಡೆದಿದ್ದ ಎಂದು ತಿಳಿಸಿದ್ದಾರೆ.

ವೇದಾಂತ್ ಸಂಬಂಧಿಕರು ನೇಪಾಳದಲ್ಲಿದ್ದಾರೆ. ಕೃತ್ಯದ ಬಳಿಕ ಆತ ನೇಪಾಳಕ್ಕೆ ಹೋಗಿದ್ದ. ಆತ ಬೆಂಗಳೂರಿಗೆ ವಾಪಸು ಬರುತ್ತಿದ್ದಂತೆ ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದರು.