ಮನೆ ರಾಜಕೀಯ ಹೆಚ್.ಡಿ ಕುಮಾರಸ್ವಾಮಿ ಮಹಾನ್ ಸುಳ್ಳುಗಾರ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

ಹೆಚ್.ಡಿ ಕುಮಾರಸ್ವಾಮಿ ಮಹಾನ್ ಸುಳ್ಳುಗಾರ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

0

ಮೈಸೂರು:  ಹೆಚ್.ಡಿ ಕುಮಾರಸ್ವಾಮಿ ಮಹಾನ್ ಸುಳ್ಳುಗಾರ. ಹಿಟ್ ಅಂಡ್ ರನ್ ಸ್ಟೇಟ್ ಮೇಂಟ್  ಮಾಡುವುದು.  ಆರೋಪ ಮಾಡಿ ಓಡಿ ಹೋಗುವ ವ್ಯಕ್ತಿ ಅಂದ್ರೆ ಅದು ಹೆಚ್ ಡಿಕೆ. ಕಳೆದ 10 ವರ್ಷಗಳಿಂದ ಆಪಾದನೆ ಮಾಡುವುದನ್ನ ಬಿಟ್ಟರೇ ಸಾಬೀತು ಮಾಡಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದ್ದಾರೆ.

Join Our Whatsapp Group

ಮೈಸೂರಿನಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ, ಸರ್ಕಾರದ ವಿರುದ್ದ ವರ್ಗಾವಣೆ ದಂಧೆ ಆರೋಪ ಮಾಡಿ ಸಾಕ್ಷ್ಯ ಇರುವ ಪೆನ್ ಡ್ರೈವ್ ಬಿಡುಗಡೆ ಮಾಡುವುದಾಗಿ ಹೇಳಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನನ್ನ ಬಳಿಯೂ ಬಿಜೆಪಿ ಮತ್ತು ಹೆಚ್.ಡಿ ಕುಮಾರಸ್ವಾಮಿಯ ಕರ್ಮಾಕಾಂಡಗಳ ಪೆನ್ ಡ್ರೈವ್ ಇದೆ. 14 ತಿಂಗಳು ಪಂಚತಾರ ಹೋಟೆಲ್ ನಲ್ಲಿದ್ದರಲ್ಲಾ ಅಲ್ಲಿನ ನಿಮ್ಮ ವಹಿವಾಟು ಈ ಪೆನ್ ಡ್ರೈವ್ ನಲ್ಲಿದೆ. ನೀವು ಬಿಡುಗಡೆ ಮಾಡಿದ ಒಂದು ಗಂಟೆಯಲ್ಲಿ ನಾನೂ ಸಹ ನಿಮ್ಮ ಕರ್ಮಕಾಂಡಳಿರುವ ಪೆನ್ ಡ್ರೈವ್ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ವರ್ಗಾವಣೆ ದಂಧೆ ನಡೆಯುತ್ತಿದೆ  ಚೆಸ್ಕಾಂ ಬೆಸ್ಕಾಂ ಹುದ್ದೆಗಳಿಗೆ  10 ಕೋಟಿ ಲಂಚ ಕೊಡುವ ವ್ಯವಸ್ಥೆ ಇದೆ ಎಂದು ಹೆಚ್.ಡಿಕೆ ಆರೋಪಿಸಿದ್ದಾರೆ .  ಯಾವುದೇ ಹುದ್ದೆಗೆ 10 ಕೊಟಿ ಕೊಟ್ಟು ಖರೀದಿ ಮಾಡುವುದು ಇದೆಯಾ..?  ಒಂದು ದಿನಕ್ಕೆ 50 ಲಕ್ಷ ಸಂಪಾದನೆ ಇರುವ ಹುದ್ದೆಗಳು ಎನ್ನುತ್ತಿದ್ದಾರೆ  ಎಲ್ಲಾದರೂ ಒಂದು ದಿನಕ್ಕೆ 50 ಲಕ್ಷ ರೂ ಸಂಪಾದನೆಯಾಗುವ ಹುದ್ದೆಗಳು ಇದೆಯಾ ಎಂದು ಪ್ರಶ್ನಿಸಿದರು.

ಹೆಚ್ ಡಿಕೆ ಹತಾಶ ರಾಗಿದ್ದಾರೆ. ಬಿಜೆಪಿಯವರಿಂದ ಸುಫಾರಿ ಪಡೆದು ಕಾಂಗ್ರೆಸ್ ವಿರುದ್ದ ದಂಧೆ ಆರೋಪ ಮಾಡುತ್ತಿದ್ದೀರಾ ಎಂದು ಕಿಡಿಕಾರಿದರು.

ವರ್ಗವಣೆ ದಂಧೆಯಲ್ಲಿ  ಯತೀಂದ್ರ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದೀರಿ. ಹಣ ಪಡೆದು ವರ್ಗಾವಣೆ ಮಾಡಿರುವುದನ್ನ ಸಾಬೀತು ಪಡಿಸಿ ನೋಡೋಣ ಎಂದು ಎಂ.ಲಕ್ಷ್ಮಣ್ ಹರಿಹಾಯ್ದರು.