ಮನೆ ರಾಜ್ಯ ಕೆಕ್ಕೆಹೊಲ ಗ್ರಾಮಕ್ಕೆ ಕಾಡಾನೆ ಲಗ್ಗೆ; ಚೆಂಡು ಹೂ, ತೆಂಗಿನ ಮರ ನಾಶ

ಕೆಕ್ಕೆಹೊಲ ಗ್ರಾಮಕ್ಕೆ ಕಾಡಾನೆ ಲಗ್ಗೆ; ಚೆಂಡು ಹೂ, ತೆಂಗಿನ ಮರ ನಾಶ

0

ಹನೂರು: ಕಾಡಾನೆ ದಾಳಿಯಿಂದಾಗಿ ಜಮೀನಿನಲ್ಲಿ ಬೆಳೆದಿದ್ದ ತೆಂಗಿನ ಮರ ನೆಲಕ್ಕುರುಳಿ, ಚೆಂಡು ಹೂ ಫಸಲಿಗೆ ಹಾನಿಯಾಗಿರುವ ಘಟನೆ ಮಲೆ ಮಹದೇಶ್ವರ ಬೆಟ್ಟ ಸಮೀಪದ ಕಕ್ಕೆಹೊಲ ಗ್ರಾಮದಲ್ಲಿ ಜರುಗಿದೆ.

Join Our Whatsapp Group

ಕಕ್ಕೆಹೊಲ ಗ್ರಾಮದ ನಾರಾಯಣ ಎಂಬುವವರಿಗೆ ಸೇರಿದ ಲಗ್ಗೆಯಿಟ್ಟಿರುವ ಕಾಡಾನೆ ಜಮೀನಿನಲ್ಲಿ ಬೆಳೆದಿದ್ದ ತೆಂಗಿನ ಮರವನ್ನು ನೆಲಕ್ಕುರುಳಿಸಿ, ಚೆಂಡು ಗೂ ಗಿಡಗಳನ್ನು ಮನಸ್ಸೋ ಇಚ್ಛೆ ತುಳಿದು ಹಾನಿಗೊಳಿಸಿದೆ.

ಗ್ರಾಮದಲ್ಲಿ ಕಾಡಾನೆ ದಾಳಿ ನಿರಂತರವಾಗಿ ನಡೆಯುತ್ತಿದ್ದ ಕಳೆದ ಕೆಲವು ದಿನಗಳ ಹಿಂದೆ ದಾಳಿ ನಡೆಸಿ ಹಲಸಿನ ಮರವನ್ನು ಹಾನಿಗೊಳಿಸಿತ್ತು. ಈ ಬಗ್ಗೆ ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೆಚ್ಚಿನ ಅನಾಹತ ಸಂಭವಿಸುವ ಮುನ್ನ ಅರಣ್ಯ ಇಲಾಖಾ ಅಧಿಕಾರಿಗಳು ಆನೆ ಹಾವಳಿ ತಡೆಗೆ ಅಗತ್ಯ ಕ್ರಮವಹಿಸಬೇಕು ಎಂದು ಗ್ರಾಮಸ್ಥರು ಆಗರಹಿಸಿದ್ದಾರೆ.