ಮನೆ ಜ್ಯೋತಿಷ್ಯ ಯಾವ ರಾಶಿಯವರು, ಯಾವ ದೇವರನ್ನು ಪೂಜಿಸಬೇಕು ?: ಇಲ್ಲಿದೆ ಮಾಹಿತಿ

ಯಾವ ರಾಶಿಯವರು, ಯಾವ ದೇವರನ್ನು ಪೂಜಿಸಬೇಕು ?: ಇಲ್ಲಿದೆ ಮಾಹಿತಿ

0

ನಾವು ನಮ್ಮ ರಾಶಿಯ ಅನುಸಾರ ಮುಂದಿನ ದಿನಗಳಲ್ಲಿ ಏನಾಗಬಹುದು ಎಂಬುದನ್ನ ಊಹಿಸಲು ಸಾಧ್ಯವಾಗುತ್ತದೆ. ಹಾಗೆಯೇ, ಒಂದೊಂದು ರಾಶಿಯವರು ಒಂದೊಂದು ದೇವರನ್ನು ಆರಾಧನೆ ಮಾಡುವುದರಿಂದ ಬಹಳ ಒಳ್ಳೆಯದಾಗುತ್ತದೆ. ಹಾಗಾದ್ರೆ ಯಾವ ರಾಶಿಯವರು ಯಾವ ದೇವರನ್ನು ಪೂಜಿಸಬೇಕು ಎಂಬುದು ಇಲ್ಲಿದೆ.

Join Our Whatsapp Group

ಮೇಷ ರಾಶಿ: ಮೇಷರಾಶಿಯವರು ಸೂರ್ಯ ದೇವನ ಆರಾಧನೆ ಮಾಡುವುದರಿಂದ ಒಳ್ಳೆಯದಾಗುತ್ತದೆ. ಪ್ರತಿದಿನ ಸೂರ್ಯನಿಗೆ ಅರ್ಘ್ಯ ಕೊಡುವುದು ಉತ್ತಮ. ಹಾಗೆಯೇ ಗಾಯತ್ರಿ ಮಂತ್ರವನ್ನು 108 ಬಾರಿ ಪಠಣೆ ಮಾಡಿ.

ವೃಷಭ ರಾಶಿ: ವೃಷಭ ರಾಶಿಯವರು ಚಂದ್ರನ ಪೂಜೆ ಮಾಡಬೇಕು. ಚಂದ್ರ ಬೀಜ ಮಂತ್ರವನ್ನು ಪ್ರತಿದಿನ ತಪ್ಪದೇ ಪಠಿಸಿ. ಹಾಗೆಯೇ ಬಿಳಿ ಬಟ್ಟೆಯನ್ನು ಬಡವರಿಗೆ ದಾನ ಮಾಡಿ.

ಮಿಥುನ ರಾಶಿ: ಮಿಥುನ ರಾಶಿಯವರು ಸಂಪತ್ತಿನ ದೇವತೆ ಲಕ್ಷ್ಮೀಯ ಆರಾಧನೆ ಮಾಡಬೇಕು. ಮುಖ್ಯವಾಗಿ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಹಾಗೆಯೇ, ಬೆಳಗ್ಗೆ ಹಾಗೂ ಸಂಜೆ ತಪ್ಪದೇ ಮನೆಯಲ್ಲಿ ದೀಪ ಹಚ್ಚಿ.

ಕಟಕ ರಾಶಿ: ಈ ರಾಶಿಯವರು ಹನುಮಂತನ ಪೂಜಿಸುವುದು ಬಹಳ ಮುಖ್ಯ. ಹನುಮಂತ ಕೃಪೆಗೆ ಪಾತ್ರರಾಗಬೇಕು ಎಂದರೆ ಶ್ರೀರಾಮನನ್ನ ಸಹ ನೀವು ಭಕ್ತಿಯಿಂದ ಆರಾಧನೆ ಮಾಡಬೇಕು. ಹಾಗೆಯೇ, ಶನಿವಾರ ಹನುಮಂತನಿಗೆ ವೀಳ್ಯದೆಲೆ ಹಾರ ಅರ್ಪಿಸಿ.

ಸಿಂಹ ರಾಶಿ: ಸಿಂಹ ರಾಶಿಯವರು ಶಿವನ ಆರಾಧನೆ ಮಾಡುವುದರಿಂದ ಜೀವನದಲ್ಲಿ ಸಮಸ್ಯೆಗಳು ಪರಿಹಾರವಾಗುತ್ತದೆ. ಈ ರಾಶಿಯವರು ಪ್ರತಿ ಸೋಮವಾರ ಬಿಲ್ವ, ಹಾಲು ಹಾಗೂ ನೀರನ್ನು ಶಿವಲಿಂಗಕ್ಕೆ ಅರ್ಪಣೆ ಮಾಡಬೇಕು.

ಕನ್ಯಾ ರಾಶಿ: ಕನ್ಯಾ ರಾಶಿಯವರು ಕಾಳಿ ಮಾತೆಯನ್ನು ಪೂಜಿಸುವುದರಿಂದ ಬಹಳ ಒಳ್ಳೆಯದಾಗುತ್ತದೆ. ಕಾಳಿಯನ್ನು ಮೆಚ್ಚಿಸಲು ಮೊದಲು ಮಹಿಳೆಯರನ್ನು ಅಗೌರವದಿಂದ ನೋಡುವುದನ್ನ ಬಿಡಬೇಕು. ಹಾಗೆಯೇ ಪ್ರತಿದಿನ ಧ್ಯಾನ ಮಾಡಬೇಕು.

ತುಲಾ ರಾಶಿ: ತುಲಾ ರಾಶಿಯವರು ದೇವಿ ಪಾರ್ವತಿಯನ್ನು ಪೂಜೆ ಮಾಡಬೇಕು ಎಂದು ಹೇಳಲಾಗುತ್ತದೆ. ನೀವು ಶಿವ ಹಾಗೂ ಪಾರ್ವತಿ ದೇವಸ್ಥಾನಕ್ಕೆ ಹೋಗಿ ಕುಂಕುಮ ಹಾಗೂ ಬಳೆಯನ್ನು ಅರ್ಪಣೆ ಮಾಡಬೇಕು.

ವೃಶ್ಚಿಕ ರಾಶಿ: ಯಾವುದೇ ಕೆಲಸವನ್ನು ಆರಂಭ ಮಾಡುವ ಮುನ್ನ ಗಣೇಶನ ಆರಾಧನೆ ಮಾಡುವುದರಿಂದ ಒಳ್ಳೆಯದಾಗುತ್ತದೆ. ಗಣೇಶನಿಗೆ ಮೋದಕವನ್ನು ಪ್ರತಿ ಬುಧವಾರ ನೈವೇದ್ಯ ಮಾಡಿ.

ಧನಸ್ಸು ರಾಶಿ: ಧನಸ್ಸು ರಾಶಿಯವರು ವಿಷ್ಣುವಿನ ಆರಾಧನೆ ಮಾಡುವುದರಿಂದ ಜೀವನದಲ್ಲಿ ಸುಖ ಹಾಗೂ ಶಾಂತಿ ನೆಲೆಸಿರುತ್ತದೆ. ಪ್ರತಿದಿನ ವಿಷ್ಣು ಮಂತ್ರ ಪಠಣೆ ಮಾಡಲು ಮರೆಯದಿರಿ. ಏಕಾದಶಿ ದಿನ ವಿಷ್ಣು ಪೂಜೆ ಮಾಡಿ.

ಮಕರ ರಾಶಿ: ಮಕರ ರಾಶಿಯವರು ದೇವಿ ಸರಸ್ವತಿಯನ್ನು ಪೂಜಿಸಬೇಕು. ನಿಮ್ಮ ಪುಸ್ತಕದ ಪುಟಗಳ ಮಧ್ಯೆದಲ್ಲಿ ನವಿಲು ಗರಿಯನ್ನು ಇಟ್ಟುಕೊಳ್ಳುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.

ಕುಂಭ ರಾಶಿ: ಕುಂಭ ರಾಶಿಯವರು ಶನಿ ದೇವನ ಪೂಜೆ ಮಾಡಬೇಕು. ತಪ್ಪದೇ ಶನಿವಾರ ಎಳ್ಳಿನ ದೀಪವನ್ನು ಹಚ್ಚಬೇಕು ಹಾಗೂ ಕಪ್ಪು ಎಳ್ಳನ್ನು ದಾನ ಮಾಡಬೇಕು. ಹಾಗೆಯೇ ನಾಯಿಗಳಿಗೆ ಸಹ ಆಹಾರವನ್ನು ಕೊಡಬೇಕು.

ಮೀನ ರಾಶಿ: ಮೀನ ರಾಶಿಯವರು ದುರ್ಗಾ ದೇವಿಯ ಆರಾಧನೆ ಮಾಡುವುದರಿಂದ ಒಳ್ಳೆಯದಾಗುತ್ತದೆ. ನವರಾತ್ರಿ ಹಬ್ಬದ ದಿನ ತಪ್ಪದೇ 9 ದಿನವೂ ಉಪವಾಸ ಮಾಡಿ. ದೇವಿಯ ದೇವಸ್ಥಾನಕ್ಕೆ ಆಗಾಗ ನೈವೇದ್ಯ ಕೊಡಿ.