ಮನೆ ರಾಜ್ಯ ನ್ಯಾಯಾಧೀಶರ ಖಾತೆಯಿಂದಲೇ ಹಣ ಲಪಟಾಯಿಸಿದ ಸೈಬರ್ ವಂಚಕರು

ನ್ಯಾಯಾಧೀಶರ ಖಾತೆಯಿಂದಲೇ ಹಣ ಲಪಟಾಯಿಸಿದ ಸೈಬರ್ ವಂಚಕರು

0

ಶಿರಸಿ: ಶಿರಸಿಯ ನ್ಯಾಯಾಲಯದ ನ್ಯಾಯಾಧೀಶರ ಖಾತೆಯಿಂದ ಸೈಬರ್ ವಂಚಕರು ಹಣ ಲಪಟಾಯಿಸಿದ್ದು, ಈ ಕುರಿತು ನಗರದ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Join Our Whatsapp Group

ಎಸ್‌ ಬಿಐ ಬ್ಯಾಂಕ್ ನವರು ಎಂದು ನ್ಯಾಯಾಧೀಶರ ಮೊಬೈಲ್ ಗೆ ಒಟಿಪಿ ಕೇಳಿ 1,23,514 ರೂ. ಎಗರಿಸಿದ್ದಾರೆ. ನ್ಯಾಯಾಧೀಶರಾದ ರಮಾನಂದ ಕಿಣಿ ಪೊಲೀಸರಿಗೆ ದೂರು ನೀಡಿದ್ದಾರೆ.

ಆನ್ ಲೈನ್ ವಂಚನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ವಿದ್ಯಾವಂತರೇ ಹೆಚ್ಚಾಗಿ ವಂಚಕರ ಜಾಲಕ್ಕೆ ಸಿಲುಕುತ್ತಿದ್ದಾರೆ. ಪೊಲೀಸರು ಈ ಕುರಿತು ತನಿಖೆ ಆರಂಭಿಸಿದ್ದಾರೆ.