ಮನೆ ಕಾನೂನು ಬಂಧಿತ ಉಗ್ರನೊಂದಿಗೆ ನಂಟು: ಯಾದಗಿರಿಯ ಯುವಕನ ಮನೆಯಲ್ಲಿ ಎನ್ ಐಎ ತಪಾಸಣೆ

ಬಂಧಿತ ಉಗ್ರನೊಂದಿಗೆ ನಂಟು: ಯಾದಗಿರಿಯ ಯುವಕನ ಮನೆಯಲ್ಲಿ ಎನ್ ಐಎ ತಪಾಸಣೆ

0

ಯಾದಗಿರಿ: ಐಸಿಸಿ ಉಗ್ರನನ್ನು ಜಾರ್ಖಂಡ್ ನ ರಾಂಚಿಯಲ್ಲಿ ಬಂಧಿಸಿರುವ ಎನ್ ಐಎ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.

ಈ ವೇಳೆ ಕರ್ನಾಟಕ ಯಾದಗಿರಿ ಜಿಲ್ಲೆಯ ಯುವನೊಂದಿಗೆ ಸಂಪರ್ಕ ಹೊಂದಿದ್ದ ಮಾಹಿತಿ ಸಿಕ್ಕಿದ್ದು, ಈ ಹಿನ್ನೆಲೆಯಲ್ಲಿ ಎನ್ ಐಎ ತಂಡ ಎರಡನೇ ಬಾರಿಗೆ ಯುವಕನ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.

ಸಚ್ಚಿದಾನಂದ ಶರ್ಮಾ ನೇತೃತ್ವದ ಎನ್ ಐಎ ತಂಡ ಬಂಧಿತ ಐಸಿಸಿ ಉಗ್ರನ ಜೊತೆ ಇನ್ ಸ್ಟಾಗ್ರಾಮ್ ನಲ್ಲಿ ಸಂಪರ್ಕ ಹೊಂದಿದ್ದ ಶಹಪುರದ ಖಾಲಿದ್ ಅಹ್ಮದ್ ಮನೆಗೆ ಭೀಟಿ ನೀಡಿ ಖಾಲಿದ್ ನನ್ನು ತೀವ್ರ ವಿಚಾರಣೆ ನಡೆಸಿದೆ. ಅಲ್ಲದೆ ಸೆಪ್ಟೆಂಬರ್ 20ರಂದು ರಾಂಚಿಯಲ್ಲಿನ ಎನ್ ಐಎ ಕಚೇರಿಗೆ ಬರುವಂತೆ ಸೂಚಿಸಿದೆ.

ಖಾಲಿದ್ ಅಹ್ಮದ್ ಮನೆಗೆ ಭೇಟಿ ನೀಡಿದ ಎನ್ ಐಎ ತಂಡ ಸತತ ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಕಳೆದ ಜುಲೈನಲ್ಲಿ ರಾಂಚಿಯಲ್ಲಿ ಐಸಿಸ್ ಉಗ್ರ ಸಂಘಟನೆಗೆ ಸೇರಿದ ಉಗ್ರನೋರ್ವನನ್ನು ಎನ್ ಐಎ ಅಧಿಕಾರಿಗಳು ಬಂಧಿಸಿದ್ದರು.