ಮನೆ ರಾಜ್ಯ ಬೆಂಗಳೂರು ಬಂದ್ ವೇಳೆ ಹೋಟೆಲ್​ ಮೇಲೆ ದಾಳಿ: ಇಬ್ಬರು ಬಿಜೆಪಿ ಕಾರ್ಯಕರ್ತರ ಬಂಧನ

ಬೆಂಗಳೂರು ಬಂದ್ ವೇಳೆ ಹೋಟೆಲ್​ ಮೇಲೆ ದಾಳಿ: ಇಬ್ಬರು ಬಿಜೆಪಿ ಕಾರ್ಯಕರ್ತರ ಬಂಧನ

0

ಬೆಂಗಳೂರು: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಸುಪ್ರೀಂಕೊರ್ಟ್​ ಆದೇಶ ವಿರೋಧಿಸಿ ಬೆಂಗಳೂರು ಬಂದ್ ಮಾಡಿದ್ದ ವೇಳೆ ಜಯನಗರದಲ್ಲಿ ನಡೆದಿದ್ದ ಹೋಟೆಲ್ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯನಗರ ಪೊಲೀಸರು ಇಬ್ಬರು ಅರೋಪಿಗಳನ್ನು ಬಂಧಿಸಿದ್ದಾರೆ.

Join Our Whatsapp Group

ಯೋಗಿಶ್ ಮತ್ತು ಸೋಮಶೇಖರ್ ಬಂಧಿತ ಅರೋಪಿಗಳು.

ಬಂದ್​ ವೇಳೆ ಏಂಟಕ್ಕು ಹೆಚ್ಚು ಜನರು  ಗುಂಪಾಗಿ ಬಂದು ಹೋಟೆಲ್ ಸೇರಿ ನಾಲ್ಕು ಕಡೆ ಕಲ್ಲು ತೂರಿದ್ದರು. ಈ ಹಿನ್ನಲೆ ಜಯನಗರ ಪೋಲೀಸ್ ಠಾಣೆಯಮಲ್ಲಿ ಪ್ರತ್ಯೇಕ ನಾಲ್ಕು ಕೇಸ್ ದಾಖಲು ಮಾಡಲಾಗಿತ್ತು. ಸದ್ಯ ಇಬ್ಬರು ಅರೋಪಿಗಳು ಬಂಧಿಸಿರುವ ಪೊಲೀಸರು, ಉಳಿದ ಹಲವಾರು ಅರೋಪಿಗಳಿಗೆ ಹುಡುಕಾಟ ನಡೆಸಿದ್ದಾರೆ. ಇ

ನ್ನು ತನಿಖೆ ವೇಳೆ ಬಂಧಿತರು ಬಿಜೆಪಿ ಕಾರ್ಯಕರ್ತರಾಗಿದ್ದು, ಜಯನಗರ ಎಂ ಎಲ್ ಎ ರಾಮಮೂರ್ತಿ ಶಿಷ್ಯರು ಎಂಬುದು ಪತ್ತೆಯಾಗಿದೆ.