ಮೈಸೂರು: ‘ನಿನಾದ ಗೃಹ ಸಂಗೀತ’ ಮೈಸೂರಿನಲ್ಲಿ ಪ್ರತಿ ತಿಂಗಳು ಆಯೋಜಿಸುವ ಸಂಗೀತ ಕಛೇರಿ ಸರಣಿಯ 9ನೆಯ ಕಾರ್ಯಕ್ರಮ ಶನಿವಾರ ಅಕ್ಟೋಬರ್ 7 ಸಂಜೆ 6 ಗಂಟೆಗೆ ಮೈಸೂರಿನ ಕೇರ್ಗಳ್ಳಿ ರಿಷಭ್ ಸಿದ್ಧಿ ಲೇಔಟ್ ‘ನಿನಾದ’ , #37 ರಲ್ಲಿ ನಡೆಯಲಿದೆ.
ರಂಜನಿ ಮೆಮೋರಿಯಲ್ ಟ್ರಸ್ಟ್ ನಡೆಸುವ ಈ ಕಾರ್ಯಕ್ರಮದಲ್ಲಿ ಈ ಬಾರಿ ಆಯುಶ್ ಮೊರೊನಿ ಅವರಿಂದ ಸಿತಾರ್ ವಾದನ ನಡೆಯಲಿದೆ.
ಕಲಾವಿದ ಆಯುಶ್ ಮೊರೊನಿ ಕಿರು ಪರಿಚಯ
ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಆಯುಶ್ ಮೊರೊನಿ ಅವರು ಶ್ರೀಮಂತ ಸಂಗೀತ ಸಂಪ್ರದಾಯದ ಕುಟುಂಬದಲ್ಲಿ ಜನಿಸಿದರು. ಅವರ ಅಜ್ಜ ಪಂ. ಗೋಪಾಲ್ ಮೊರೊನಿ ಗ್ವಾಲಿಯರ್ ಘರಾನಾದ ಪ್ರಸಿದ್ಧ ಗಾಯಕರಾಗಿದ್ದರು. ಆಯುಶ್ ಅವರು ಚಿಕ್ಕ ವಯಸ್ಸಿನಲ್ಲೇ ತಮ್ಮ ತಂದೆ, ಖ್ಯಾತ ಸಿತಾರ್ ವಾದಕ ಪಂ. ಅರುಣ್ ಮೊರೊನಿ ಅವರಲ್ಲಿ ಸಿತಾರ್ ಕಲಿಕೆಯನ್ನು ಆರಂಭಿಸಿದರು. ಪಂ.ಅರುಣ್ ಅವರು ಹೆಸರಾಂತ ದ್ರುಪದ್ ಗಾಯಕ ಉಸ್ತಾದ್ ಜಿಯಾ ಫರಿದ್ದುದಿನ್ ಡಾಗರ್ ಮತ್ತು ಇಮ್ದಾದ್ಖಾನಿ ಘರಾಣೆಯ ಹೆಸರಾಂತ ಸಂಗೀತಗಾರರಾದ ಪಂ. ಭೀಮಲೇಂದು ಮುಖರ್ಜಿ ಅವರ ಶಿಷ್ಯರು.
ಆಯುಶ್ ಅವರು ಆಲ್ ಇಂಡಿಯಾ ರೇಡಿಯೊದ “ಎ” ದರ್ಜೆಯ ಕಲಾವಿದರು. ಜೊತೆಗೆ ಅವರು ಆಲ್ ಇಂಡಿಯಾ ರೇಡಿಯೋ ಸಂಗೀತ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಪಡೆದವರು. ಆಯುಶ್ ದೇಶದ ಅನೇಕ ಪ್ರತಿಷ್ಠಿತ ಸಮ್ಮೇಳನಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಈ ಹೆಮ್ಮೆಯ ಕಲಾವಿದ ಅಮೆಜಾನ್ ಇಂಡಿಯಾ ದಲ್ಲಿ ಮೆಷಿನ್ ಲರ್ನಿಂಗ್ ಸೈಂಟಿಸ್ಟ್ ಆಗಿ ಸೇವಾ ನಿರತರಾಗಿದ್ದಾರೆ. ಆಯುಶ್ ಅವರಿಗೆ ತಬಲಾದಲ್ಲಿ ಯುವ ಪೀಳಿಗೆಯ ಅತ್ಯಂತ ಪ್ರತಿಭಾವಂತ ಮತ್ತು ಹೆಚ್ಚು ಬೇಡಿಕೆಯಿರುವ ತಬಲಾ ವಾದಕರಾದ ಬೆಂಗಳೂರಿನ ರೂಪಕ್ ಕಲ್ಲೂರ್ಕರ್ ಸಾಥ್ ನೀಡಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9449676014ನ್ನು ಸಂಪರ್ಕಿಸಬಹುದು.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.