ಮನೆ ಅಪರಾಧ ಗುಂಡ್ಲುಪೇಟೆ : ಬಾಟಲಿಯಿಂದ ಚುಚ್ಚಿ ಕೊಲೆಗೆ ಯತ್ನ

ಗುಂಡ್ಲುಪೇಟೆ : ಬಾಟಲಿಯಿಂದ ಚುಚ್ಚಿ ಕೊಲೆಗೆ ಯತ್ನ

0

ಗುಂಡ್ಲುಪೇಟೆ : ರಸ್ತೆ ಮಧ್ಯೆ ಕುಳಿತು ಮದ್ಯಪಾನ ಮಾಡುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ಮೂವರ ಮೇಲೆ ಬಿಯರ್ ಬಾಟಲಿಯಿಂದ ಚುಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಕೆಪಿಟಿ ಹೋಟೆಲ್ ಮುಂಬಾಗ ಸುನೀಲ್, ಪ್ರಜ್ವಲ್, ಸಮಂತ್ ಎಂಬ ಯುವಕರು ವಾಕ್ ಮಾಡುತ್ತಿದ್ದರು.

ಈ ವೇಳೆ ಲೇಔಟ್ ರಸ್ತೆ ಮಧ್ಯದಲ್ಲಿ ಜಹಿತ್, ಸೂಫಿ ಯಾನ್, ಪೀರ್, ಸೋಹೈಲ್ ಎಂಬುವರು ಕುಳಿತು ಮದ್ಯಪಾನ ಮಾಡುತ್ತಿದ್ದನ್ನು ಕಂಡು ಪ್ರಶ್ನಿಸಿದಾಗ, ಬಿಯರ್ ಬಾಟಲಿಯಿಂದ ಚುಚ್ಚಿ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಸುನೀಲ್, ಪ್ರಜ್ವಲ್, ಸಮಂತ್ ಎಂಬ ಮೂವರು ಯುವಕರ ತಲೆ, ಕೈ ಮುಂಭಾಗಳಿಗೆ ಬಾಟಲಿಯಿಂದ ಚುಚ್ಚಿ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ದೂರು ದಾಖಲಾಗಿದೆ.

ಗಾಯಗೊಂಡ ಯುವಕರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿ ನಂತರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಸರ್ಕಲ್ ಇನ್ಸ್ಪೆಕ್ಟರ್ ಪರಮಶಿವಮೂರ್ತಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೆ ಒಳಗಾದವರಿಗೆ ಹೇಳಿಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ.