ಮನೆ ಸ್ಥಳೀಯ ರಾಜವಂಶಸ್ಥ ಯದುವೀರ್’ರಿಂದ ವಿಜಯಯಾತ್ರೆ: ಬನ್ನಿಮರಕ್ಕೆ ಪೂಜೆ

ರಾಜವಂಶಸ್ಥ ಯದುವೀರ್’ರಿಂದ ವಿಜಯಯಾತ್ರೆ: ಬನ್ನಿಮರಕ್ಕೆ ಪೂಜೆ

0

ಮೈಸೂರು:  ಮೈಸೂರು ಅರಮನೆಯಲ್ಲಿ ದಸರಾ ಸಂಭ್ರಮ ಕಳೆಗಟ್ಟಿದ್ದು, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು ಬನ್ನಿಮರಕ್ಕೆ ಪೂಜೆ ಸಲ್ಲಿಸಿ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.

ಪಲ್ಲಕ್ಕಿಯಲ್ಲಿ ಪಟ್ಟದ ಕತ್ತಿ ಇಟ್ಟು ಪೂಜೆ ಸಲ್ಲಿಕೆ ಮಾಡಲಾಯಿತು. ಅರಮನೆ ಆವರಣದಿಂದ ಭುವನೇಶ್ವರಿ ದೇಗುಲದವರೆಗೆ ರಾಜವಂಶಸ್ಥ ಯದುವೀರ್ ಅವರು ವಿಜಯಯಾತ್ರೆ ಮೆರವಣಿಗೆಯಲ್ಲಿ ಬಂದು ನಂತರ ಬನ್ನಿಮರಕ್ಕೆಪೂಜೆ ಸಲ್ಲಿಸಿದರು.