ಮನೆ ರಾಜ್ಯ ಮಂಡ್ಯ ವಿಸಿ ನಾಲೆಗೆ ಕಾರು ಪಲ್ಟಿ: ನಾಲ್ವರು ಜಲಸಮಾಧಿ

ಮಂಡ್ಯ ವಿಸಿ ನಾಲೆಗೆ ಕಾರು ಪಲ್ಟಿ: ನಾಲ್ವರು ಜಲಸಮಾಧಿ

0

ಮಂಡ್ಯ: ವಿಸಿ ನಾಲೆಗೆ ಕಾರು ಪಲ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಜಲಸಮಾಧಿಯಾದ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬನಘಟ್ಟ ಬಳಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಿವಾಸಿ ಚಂದ್ರಪ್ಪ ಎನ್ನುವವರಿಗೆ ಸೇರಿದ ಕಾರು ಇದಾಗಿದ್ದು, ಪಾಂಡವಪುರದಿಂದ ನಾಗಮಂಗಲಕ್ಕೆ ಹೋಗುವ ವೇಳೆ ರಸ್ತೆ ತಿರುವಿನಲ್ಲಿ ವೇಗವಾಗಿ ಬಂದು ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಈ ಘಟನೆ ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಾಂಡವಪುರ ತಾಲೂಕಿನ ಬನಘಟ್ಟ ಗ್ರಾಮದ ಬಳಿ ದುರಂತ ವಿಸಿ ನಾಲೆಯಿಂದ ಕಾರು ಹೊರ ತೆಗೆಯಲು ಕಾರ್ಯಾಚರಣೆ ನಡೆಸಲಾಗುತ್ತಿದ್ದು, ನೀರು ರಭಸವಾಗಿ ಹರಿಯುತ್ತಿರುವುದರಿಂದ ರಕ್ಷಣಾ ಕಾರ್ಯ ವಿಳಂಬವಾಗುತ್ತಿದೆ.

ಕಾರ್ಯಾಚರಣೆ ಹಿನ್ನೆಲೆ ನಾಲೆಗೆ ಕೆಆರ್ ಎಸ್ ಡ್ಯಾಂನಿಂದ ನೀರು ಬಿಡುಗಡೆ ಸ್ಥಗಿತಗೊಳಿಸಲಾಗಿದ್ದು, ಕ್ರೇನ್‌ ಮೂಲಕ ನಾಲೆಯಿಂದ ಕಾರು ಮೇಲೆತ್ತುವ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಘಟನಾ ಸ್ಥಳಕ್ಕೆ  ಭೇಟಿ ನೀಡಿರುವ ಡಿಸಿ ಡಾ.ಕುಮಾರ್‌, ಎಸ್‌ ಪಿ ಯತೀಶ್‌ ಸಿಇಒ ತನ್ವೀರ್ ಸ್ಥಳದಲ್ಲೇ ‌ಮೊಕ್ಕಾಂ ಹೂಡಿದ್ದಾರೆ..