ಮನೆ ಅಪರಾಧ ಬಳ್ಳಾರಿ: ಹಾಡಹಗಲೇ ಪುರಸಭಾ ಸದಸ್ಯನ ಮೇಲೆ ಹಲ್ಲೆ

ಬಳ್ಳಾರಿ: ಹಾಡಹಗಲೇ ಪುರಸಭಾ ಸದಸ್ಯನ ಮೇಲೆ ಹಲ್ಲೆ

0


ಬಳ್ಳಾರಿ: ಹಾಡಹಗಲೇ ಪುರಸಭೆ ಸದಸ್ಯನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಬಳ್ಳಾರಿ ಜಿಲ್ಲೆ ತೋರಣಗಲ್ ಪಟ್ಟಣದ ಘೋರ್ಪಡೆ ನಗರದಲ್ಲಿ ನಡೆದಿದೆ.
ಪುರಸಭೆ ಸದಸ್ಯ ನಾಗರಾಜ ನಾಯ್ಕ(32) ಮೇಲೆ ಶಿವಕುಮಾರ್​​​​​​ ಎಂಬುವವರು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

11ನೇ ವಾರ್ಡ್​‌ ನ ಪುರಸಭೆ ಸದಸ್ಯನಾಗಿರುವ ನಾಗರಾಜ ನಾಯ್ಕ ಹಾಗೂ ಶಿವಕುಮಾರ್ ಅವರಿಗೆ ಕಳೆದ ಒಂದು ವರ್ಷದಿಂದ ಮನೆ ಮುಂದೆ ಇರುವ ಚರಂಡಿ ವಿಚಾರವಾಗಿ ಗಲಾಟೆಗಳು ನಡೆಯುತ್ತಿದ್ದವು. ಅದೇ ರೀತಿ ಗಲಾಟೆ ನಡೆದಿದ್ದು, ಈ ವೇಳೆ ಮಾತಿಗೆಮಾತು ಬೆಳೆದು ನಾಗರಾಜ ಮೇಲೆ ಮಚ್ಚಿನಿಂದ ಶಿವರಾಜ್ ಹಲ್ಲೆ ನಡೆಸಿದ್ದಾರೆ.ತಲೆಗೆ, ಬೆನ್ನಿಗೆ, ಕೈಗಳಿಗೆ ಮಚ್ಚಿನಿಂದ ಹಲ್ಲೆ ಆಗಿದೆ.

ಗಾಯಾಳು ನಾಗರಾಜ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ತೋರಣಗಲ್​​​​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.