ಮನೆ ಅಪರಾಧ ಮದ್ದೂರು: ಕುದರಗುಂಡಿಯಲ್ಲಿ ಯುವಕನ ಹತ್ಯೆ

ಮದ್ದೂರು: ಕುದರಗುಂಡಿಯಲ್ಲಿ ಯುವಕನ ಹತ್ಯೆ

0

ಮದ್ದೂರು:ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿರುವ ಘಟನೆ ತಾಲೂಕಿನ ಕುದರಗುಂಡಿ ಗ್ರಾಮದ ಮಲ್ಲಯ್ಯ ನಗರದಲ್ಲಿ ನಡೆದಿದೆ.


ಗ್ರಾಮದ ಶಿವಾನಂದ (19 )ನನ್ನ ಭೀಕರವಾಗಿ ಕೊಲೆಗೈದು ಪರಾರಿಯಾಗಿದ್ದಾರೆ,ಮನೆಯ ಕೊಠಡಿಯಲ್ಲಿ ಕುತ್ತಿಗೆಗೆ ಅಗ್ಗ ಬಿಗಿದು ಮಾರಕಾಸ್ತ್ರ ದಿಂದ ದಾಳಿ ಮಾಡಿ ಹತ್ಯೆ ಮಾಡಲಾಗಿದೆ.
ಎಳನೀರು ವ್ಯಾಪಾರ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ ಶಿವಾನಂದ ಸೋಮವಾರ ರಾತ್ರಿ ಮನೆಯೊಂದರ ಕೊಠಡಿಯಲ್ಲಿ ನಿದ್ರಿಸುತ್ತಿದ್ದು,ಈ ವೇಳೆ ದುಷ್ಕರ್ಮಿಗಳು ಕುತ್ತಿಗೆಗೆ ಹಗ್ಗ ಬಿಗಿದು ಮಾರಕಾಸ್ತ್ರ ದಿಂದ ದೇಹದ ನಾನಾ ಭಾಗದ ಮೇಲೆ ಹಲ್ಲೆ ಮಾಡಿದ್ದು,ಸಾವನ್ನಪ್ಪಿರುವುದನ್ನು ಖಚಿತಪಡಿಸಿಕೊಂಡು ಹೊರನಡೆದಿದ್ದಾರೆ.
ತಡ ರಾತ್ರಿ ವೇಳೆ ನಡೆದ ದುರ್ಘಟನೆ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದ್ದು, ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಹತ್ಯೆ ನಡೆದಿದೆ ಎಂದು ಶಂಕಿಸಲಾಗಿದೆ.
ಮದ್ದೂರು ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಕೊಲೆಗೈದು ಪರಾರಿಯಾಗಿರುವವರ ಪತ್ತೆಗೆ ಶೋಧ ಕೈಗೊಂಡಿದ್ದಾರೆ.