ನೋಯ್ಡಾ: ಜಗಳ ತಾರಕಕ್ಕೇರಿ ಸ್ನೇಹಿತರೇ ವಿದ್ಯಾರ್ಥಿಯನ್ನು ಹತ್ಯೆ ಮಾಡಿ ಬಳಿಕ ಶವವನ್ನು ಹೊಲದಲ್ಲಿ ಹೂತುಹಾಕಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.
ನೋಯ್ಡಾ ಮೂಲದ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಮತ್ತು ಉದ್ಯಮಿಯ ಪುತ್ರ ಯಶ್ ಮಿತ್ತಲ್ ಸೋಮವಾರದಿಂದ ತನ್ನ ಹಾಸ್ಟೆಲ್ ನಿಂದ ನಾಪತ್ತೆಯಾಗಿದ್ದ.
ಆತನ ತಂದೆ ದೀಪಕ್ ಮಿತ್ತಲ್ ಗೆ ಅವರ ಮಗನ ಬಿಡುಗಡೆ ಮಾಡಬೇಕೆಂದರೆ 6 ಕೋಟಿ ನೀಡುವಂತೆ ಮೆಸೇಜ್ ಬಂದಿತ್ತು. ಹಾಗಾಗಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕ್ಯಾಂಪಸ್ ನ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದಾಗ, ಫೋನ್ ನಲ್ಲಿ ಮಾತನಾಡುವಾಗ ಯಶ್ ಸೋಮವಾರ ವಿಶ್ವವಿದ್ಯಾಲಯದಿಂದ ಹೊರಹೋಗುವುದು ಕಂಡುಬಂದಿದೆ.
ಈ ಹಿನ್ನಲೆ ಫೋನ್ ಕರೆಯ ದಾಖಲೆಗಳನ್ನು ಪರಿಶೀಲಿಸಿದಾಗ ಅದರಲ್ಲಿ ರಚಿತ್ ಎಂಬುವವನ ನಂಬರ್ ಇತ್ತು, ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಯಶ್, ರಚಿತ್, ಶಿವಂ ಹಾಗೂ ಸುಶಾಂತ್ ಹಾಗೂ ಶಿವಮ್ ಅವರೊಂದಿಗೆ ಆಗಾಗ ಸುತ್ತಾಡುತ್ತಿದ್ದ ಎಂಬುದು ಗೊತ್ತಾಗಿತ್ತು.
ಫೆಬ್ರವರಿ 26 ರಂದು, ಅವರು ಪಾರ್ಟಿಗಾಗಿ ಉತ್ತರ ಪ್ರದೇಶದ ಅಮ್ರೋಹಾ (ಸುಮಾರು 100 ಕಿಮೀ ದೂರ) ಗಜ್ರೌಲಾ ಎಂಬಲ್ಲಿನ ಹೊಲಕ್ಕೆ ಯಶ್ ಅವರನ್ನು ಕರೆದೊಯ್ದರು. ಪಾರ್ಟಿಯ ಸಮಯದಲ್ಲಿ, ಗಲಾಟೆ ನಡೆಯಿತು. ಅವರು ಯಶ್ ಅವರನ್ನು ಕೊಂದು ಶವವನ್ನು ಹೂತು ಹಾಕಿದರು. ರಚಿತ್ ಸ್ಥಳವನ್ನು ಗುರುತಿಸಿದ ನಂತರ ನಾವು ಶವವನ್ನು ಹೊರತೆಗೆದಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸಾದ್ ಮಿಯಾ ಖಾನ್ ಹೇಳಿದ್ದಾರೆ.
ಪೊಲೀಸರು ದಾದ್ರಿಯಲ್ಲಿ ಇತರ ಆರೋಪಿಗಳನ್ನು ಪತ್ತೆ ಮಾಡಿ, ಕೂಂಬಿಂಗ್ ನಂತರ ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ. ಮತ್ತೊಬ್ಬ ಆರೋಪಿ ಶುಭಂ ಪರಾರಿಯಾಗಿದ್ದಾನೆ.
ಬಾಗಲಕೋಟೆಯಲ್ಲಿ ಬೃಹತ್ ಮೊಸಳೆಯ ರಕ್ಷಣೆ
ಡಿಕೆಶಿ ವಿರುದ್ಧ ದೇವರಾಜೇಗೌಡ ಇನ್ನೊಂದು ಬಾಂಬ್…!
ಸೋಮವಾರ ಪೇಟೆಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ
ಅಭಿವೃದ್ಧಿಗೆ ಮತ ನೀಡಿ ಎಂದ ರಶ್ಮಿಕ ಮಂದಣ್ಣ
SSLCಗೆ ಇನ್ನಿರಲ ಗ್ರೇಸ್ ಮಾರ್ಕ್ಸ್
ಕಾಫಿ ನಾಡಿನಲ್ಲಿ ಮಳೆಯ ಅಬ್ಬರ
T20 ವಿಶ್ವಕಪ್ ನಲ್ಲಿ ಕನ್ನಡ ರಾರಾಜಿಸಲಿದೆ.
ಕೆಎಸ್ಆರ್ಟಿಸಿ ಬಸ್ನ ಕಿಟಕಿಯಲ್ಲಿ ಮಹಿಳೆಯ ತಲೆ ಲಾಕ್.
ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಚಿರತೆ….
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.