ಮನೆ ಅಪರಾಧ ಪಾಂಡವಪುರ: ಕೆರೆಗೆ ಈಜಲು ಇಳಿದ ಬಾಲಕ ಸಾವು

ಪಾಂಡವಪುರ: ಕೆರೆಗೆ ಈಜಲು ಇಳಿದ ಬಾಲಕ ಸಾವು

0

ಪಾಂಡವಪುರ: ತಾಲೂಕಿನ ತೊಣ್ಣೂರು ಕೆರೆಗೆ ಈಜಲು ಇಳಿದ ಬಾಲಕ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ಯುಗಾದಿ ದಿನದಂದು ನಡೆದಿದೆ.

Join Our Whatsapp Group


ತಾಲೂಕಿನ ಕೋಡಾಲ ಗ್ರಾಮದ ಕುಮಾರ್ ಎಂಬುವವರ ಪುತ್ರ, ಪಟ್ಟಣದ ಬಡ್ಸ್ ಪೌಂಡೇಷನ್ ಶಾಲೆಯ ೯ನೇ ತರಗತಿ ವಿದ್ಯಾರ್ಥಿ ಪ್ರಜ್ವಲ್(೧೪) ಮೃತ ಬಾಲಕ.
ಘಟನೆ ವಿವರ : ಕೋಡಾಲ ಗ್ರಾಮಸ್ಥರು ಯುಗಾದಿ ದಿನದಂದು ಗ್ರಾಮದ ಆಂಜನೇಯಸ್ವಾಮಿ ದೇವರ ಮೂರ್ತಿಯನ್ನು ತೊಣ್ಣೂರು ಕೆರೆಗೆ ತಂದು ಕೆರೆಯ ನೀರಿನಿಂದ ಮೂರ್ತಿಯನ್ನು ಶುದ್ಧಿಕರಿಸಿಕೊಂಡು ಗ್ರಾಮಕ್ಕೆ ವಾಪಸ್ಸಾದ ಬಳಿಕವೇ ಹಬ್ಬ ಮತ್ತು ದೇವರ ಉತ್ಸವ ಆಚರಿಸುವುದು ಬಹಳ ಹಿಂದಿನಿAದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಅದರಂತೆ ಮಂಗಳವಾರ ಗ್ರಾಮಸ್ಥರೊಂದಿಗೆ ತೊಣ್ಣೂರು ಕೆರೆಗೆ ಆಗಮಿಸಿದ್ದ ಬಾಲಕ ಕೆಲ ಸ್ನೇಹಿತರೊಂದಿಗೆ ಈಜಲು ಕೆರೆಗೆ ಇಳಿದಿದ್ದಾನೆ. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಮೃತದೇಹಕ್ಕಾಗಿ ಹುಡುಕಾಟ : ಮಂಗಳವಾರ ಬೆಳಗ್ಗೆ ೧೦ ಗಂಟೆಯ ಸಮಯದಲ್ಲಿ ಘಟನೆ ಸಂಭವಿಸಿದ್ದು, ಅಗ್ನಿ ಶಾಮಕ ದಳದ ರಾಘವೇಂದ್ರ ಅವರ ಮಾರ್ಗದರ್ಶನದಲ್ಲಿ ಈಶ್ವರ ಮಲ್ಪೆಯವರ ತಂಡದ ಸಿಬ್ಬಂದಿಗಳು, ಮುಳುಗು ತಜ್ಞರು ಇಡೀ ದಿನ ಹುಡುಕಾಟ ನಡೆಸಿದ್ದರು ಮೃತ ದೇಹ ಪತ್ತೆಯಾಗಿರಲಿಲ್ಲ. ಬುಧವಾರ ಬೆಳಗ್ಗೆ ಶವ ಪತ್ತೆಯಾಗಿದ್ದು, ಪಟ್ಟಣದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಆರಸುದಾರರಿಗೆ ಒಪ್ಪಿಸಿಲಾಗಿದೆ. ಈ ಸಂಬAಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ತಹಸೀಲ್ದಾರ್ ಜಿ.ಎಸ್.ಶ್ರೇಯಸ್, ಪೊಲೀಸ್ ಇನ್ಸ್ಪೆಕ್ಟರ್ ಕುಮಾರ್ ಭೇಟಿ ನೀಡಿದರು.