ಮನೆ ಅಪರಾಧ ಚಿಕ್ಕಮಗಳೂರು: ಅಪಘಾತವಾಗಿದ್ದ ಕಾರನ್ನು ಎಳೆದೊಯ್ಯುವಾಗ ಹೊತ್ತಿ ಉರಿದ ಕಾರು

ಚಿಕ್ಕಮಗಳೂರು: ಅಪಘಾತವಾಗಿದ್ದ ಕಾರನ್ನು ಎಳೆದೊಯ್ಯುವಾಗ ಹೊತ್ತಿ ಉರಿದ ಕಾರು

0

ಚಿಕ್ಕಮಗಳೂರು : ಅಪಘಾತವಾಗಿ ಎಳೆದೊಯ್ಯುತ್ತಿದ್ದ ಕಾರು ಹೊತ್ತಿ ಉರಿದ ಘಟನೆ ಕಳಸ ತಾಲೂಕಿನ ಸಂಸೆಯ ಬಾಲ್ಗಲ್ ಬಳಿ ನಡೆದಿದೆ.

Join Our Whatsapp Group

ಅಪಘಾತವಾಗಿದ್ದ ಕಾರನ್ನ ಮಂಗಳೂರಿನತ್ತ ಎಳೆದೊಯ್ಯುವಾಗ ರಸ್ತೆ ಮಧ್ಯೆ ಆಕಸ್ಮಿಕವಾಗಿ ತಗುಲಿದ ಬೆಂಕಿ ಹೊತ್ತಿಕೊಂಡಿದೆ. ಕಾರು ಸಂಪೂರ್ಣವಾಗಿ ಭಸ್ಮವಾಗಿದೆ.

ಬಾಲ್ಗಲ್ ತಿರುವಿನಲ್ಲಿ ರಸ್ತೆ ಬದಿ ಇದ್ದ ಟಿಂಬರ್ ಮರಕ್ಕೆ ಢಿಕ್ಕಿ ಹೊಡೆದು ನಡೆದಿದ್ದ ಅಪಘಾತದಲ್ಲಿ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದರು. ಕಳಸ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.