ಮನೆ ಅಪರಾಧ ಜೈ‍ಪುರ: ಕಾರು ನದಿಗೆ ಉರುಳಿ ಇಬ್ಬರು ಸಾವು

ಜೈ‍ಪುರ: ಕಾರು ನದಿಗೆ ಉರುಳಿ ಇಬ್ಬರು ಸಾವು

0

ಜೈ‍ಪುರ:  ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ಸೋಮವಾರ ಕಾರೊಂದು ನದಿಗೆ ಬಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ.

Join Our Whatsapp Group

ಭಾನುವಾರ ಸಂಜೆ ಖೇರ್‌ ವಾಡದ ಜಲ್‌ ಪಕ ಎಂಬಲ್ಲಿ ಈ ಘಟನೆ ನಡೆದಿದೆ. ಐವರು ಸ್ನೇಹಿತರು ದೇಗುಲವೊಂದಕ್ಕೆ ಭೇಟಿ ನೀಡಿ ಹಿಂದಿರುತ್ತಿದ್ದರು. ರಸ್ತೆ ತಿರುವಿನಲ್ಲಿ ಅಡ್ಡ ಬಂದ ಹಸುವಿಗೆ ಡಿಕ್ಕಿ ಹೊಡೆದು ಕಾರು ನದಿಗೆ ಬಿದ್ದಿದೆ.

 ಮೂವರು ಕಾರಿನಿಂದ ಹೊರಗೆ ಬಂದಿದ್ದು, ಚಿರಾಗ್ ಮೇಘ್‌ವಾಲ್‌ (24) ಹಾಗೂ ತಿಕೇಶ್ ಮೀನಾ (25) ಕಾರಿನೊಳಗೆ ಸಿಲುಕಿ ದಾರುಣವಾಗಿ ಸಾವಿಗೀಡಾಗಿದ್ದಾರೆ.

 ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.