ಹುಣಸೂರು: ಹುಣಸೂರು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳ ಕರ್ಮಕಾಂಡ ಮತ್ತೆ ಬೆಳಕಿಗೆ ಬಂದಿದ್ದು, ಲಂಚ ಪಡೆದು ಒಂದೇ ದಿನ ಕೇರಳದ 150 ಮಂದಿಗೆ ಅಕ್ರಮವಾಗಿ ಎಲ್ ಎಲ್ ಆರ್ ವಿತರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹುಣಸೂರು ಪ್ರಾದೇಶಿಕ ಸಾರಿಗೆ ಇಲಾಖೆ ಭ್ರಷ್ಟಾಚಾರದ ಬೆನ್ನತ್ತಿ ಇತ್ತೀಚಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರೂ ಕೂಡ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಮತ್ತೆ ಲಂಚಕ್ಕೆ ಕೈ ಚಾಚಿದ್ದಾರೆ.
ಒಂದು ಎಲ್ ಎಲ್ ಆರ್ ಗೆ 1 ಸಾವಿರ ರೂ. ಪಡೆದು ಒಂದೇ ದಿನ 150 ಎಲ್ ಎಲ್ ಆರ್ ಗಳನ್ನು ನೀಡಿದ್ದಾರೆ. ಕೇರಳದವರಿಗೆ ನಮ್ಮ ಬಳಿ ತರಬೇತಿ ಪಡೆದಿದ್ದಾರೆಂದು ಫಾರ್ಮ್ 14 ರ ಅಡಿಯಲ್ಲಿ ಎಲ್ ಎಲ್ ಆರ್ ನೀಡಿದ್ದಾರೆ.
ಅಂತರ್ ರಾಜ್ಯ ನಾಗರಿಕರಿಗೆ ಎಲ್ ಎಲ್ ಆರ್ ನೀಡಲು ಕೆಲವು ನಿಯಮಗಳಿದ್ದು, ಒಂದು ತಿಂಗಳು ತರಬೇತಿ ಪಡೆಯಬೇಕು. ಸ್ಥಳೀಯವಾಗಿ ವಾಸವಾಗಿರುವುದಕ್ಕೆ ದಾಖಲೆಗಳನ್ನು ನೀಡಬೇಕು. ಸರಿಯಾಗಿ ವಾಹನ ಚಲಾಯಿಸಲು ತಿಳಿದಿರಬೇಕು. ನಿಯಮವಿದ್ದರೂ ಕೂಡ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಸ್ಥಳೀಯ ಪ್ರದೇಶಗಳಲ್ಲಿ ವಾಸಿಸುತ್ತಿರುವುದಕ್ಕೆ ಯಾವುದೇ ದಾಖಲೆ ಒದಗಿಸದ, ಕೇರಳ ಮೂಲದ ವ್ಯಕ್ತಿಗಳಿಗೆ ಎಲ್ ಎಲ್ ಆರ್ ವಿತರಿಸಿರುವುದು ವಿಪರ್ಯಾಸವೇ ಸರಿ.
ಎಲ್ ಎಲ್ ಆರ್ ಪಡೆಯಲು ಆನ್ ಲೈನ್ ನಲ್ಲಿ ಸಲ್ಲಿಸಿದ ದಾಖಲೆಗಳನ್ನು ತೆಗೆದುಕೊಂಡು ಬಂದು ಸೂಪರಿಡೆಂಟ್ ಬಳಿ ನೇರವಾಗಿ ಹಾಜರಾಗಬೇಕು. ಸೂಪರಿಡೆಂಟ್ ಪರಿಶೀಲನೆ ಮಾಡಬೇಕು. ಪರಿಶೀಲಿಸಿದ ನಂತರವೇ ಎಲ್ ಎಲ್ ಆರ್ ನೀಡಬೇಕು. ಆದರೆ ಕೆಲವು ಡ್ರೈವಿಂಗ್ ಸ್ಕೂಲ್ ಗಳ ಮುಖಾಂತರ ಬಂದ ಅರ್ಜಿಯನ್ನು ಪರಿಶೀಲನೆ ನಡೆಸದೇ ಹಣ ಪಡೆದು ಎಲ್ ಎಲ್ ಅರ್ ವಿತರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಎಲ್ ಎಲ್ ಆರ್ ವಿತರಿಸಲು ಫಾರ್ಮ 14 ಅನ್ನು ಭರ್ತಿ ಮಾಡಬೇಕು, ಅದರಲ್ಲಿ ತರಬೇತಿ ನೀಡಿದ ಸವಿವರ ಇರಲಿದೆ. ಆದರೆ ಅಧಿಕಾರಿಗಳು 2 ತಿಂಗಳ ಹಿಂದಿನ ದಿನಾಂಕವನ್ನು ನಮೂದಿಸಿ ತರಬೇತಿ ನೀಡದೇ ಮೋಸವೆಸಗುತ್ತಿದ್ದಾರೆ. ಸೌದಿ, ದುಬೈನಲ್ಲಿರುವವರಿಗೆ ಕೂಡ ಎಲ್ ಎಲ್ ಆರ್ ವಿತರಿಸಲಾಗಿದೆ ಎನ್ನಲಾಗಿದೆ.
ಎ ಆರ್ ಟಿ ಓ ಭಗವಾನ್ ದಾಸ್ ತಿಪಟೂರಿಗೆ ವರ್ಗಾವಣೆಯಾಗಿದ್ದು, ಗುರುವಾರ ಅಧಿಕಾರದಿಂದ ಬಿಡುಗಡೆಯಾಗುವ ಸಮಯದಲ್ಲಿ 150 ಮಂದಿಗೆ ಎಲ್ ಎಲ್ ಆರ್ ವಿತರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದನ್ನು ಪ್ರಶ್ನಿಸಿದರೆ ಡಿಸಿ ಆದೇಶಿಸಿದ್ದಾರೆ ಎಂದು ಸಬೂಬು ಹೇಳುತ್ತಿದ್ದು, ಡಿಸಿ ಆದೇಶ ಮಾಡಿದ್ದರೂ ಕೂಡ ದಾಖಲೆಗಳನ್ನು ಪರಿಶೀಲಿಸದೇ ಎಲ್ ಎಲ್ ಆರ್ ವಿತರಿಸುವುದು ಎಷ್ಟು ಸರಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಅಲ್ಲದೇ ಕರ್ತವ್ಯಲೋಪ ಎಸಗುತ್ತಿರುವ ಸಾರಿಗೆ ಇಲಾಖೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.