ಮೂತ್ರ ವಿಸರ್ಜನಾ ನಾಳದ ಸೋಂಕು ನಿವಾರಣೆಗೆ ಸೂಚನೆಗಳು
★ ಮೂತ್ರವನ್ನು ಹಿಡಿದಿರಬಾರದು, ಮೂತ್ರ ವಿಸರ್ಜಬೇಕೆಂದೆನಿಸಿದ ಕೂಡದೆ ಹೋಗಿ ವಿಸರ್ಜಿಸಬೇಕು. ಮೂತ್ರಕೋಶ ಪೂರ್ತಿಯಾಗಿ ಖಾಲಿಯಾಗುವವರೆಗೂ ಮಾಡಬೇಕು.ಮಧ್ಯದಲ್ಲಿ ನಿಲ್ಲಿಸಕೂಡದು.ಇವುಗಳನ್ನು ಅನುಸರಿಸದೇ ಹೋದರೆ ಬ್ಯಾಕ್ಟೀರಿಯಾ ಸೇರಿಕೊಳ್ಳುತ್ತದೆ.
★ಧಾರಳವಾಗಿ ನೀರು ಕುಡಿಯಬೇಕು. ಹಾಗೆ ಮಾಡಿದರೆ ಮೂತ್ರದ ಮೂಲಕ ಬ್ಯಾಕ್ಟೀರಿಯಾ ಕೊಚ್ಚಿ ಹೋಗುತ್ತದೆ.
★ ಮೂತ್ರ ತೆಳು ಹಳದಿ ಬಣ್ಣವಾಗಿದ್ದರೆ, ನೀವು ಸಾಕಷ್ಟು ನೀರು ಕುಡಿಯುತ್ತಿರುವಿರಿ ಎಂದು ಭಾವಿಸಬೇಕು. ಗಾಢ ಹಳದಿ ಬಣ್ಣವಾದರೆ ಮತ್ತಷ್ಟು ನೀರು ಕುಡಿಯಿರಿ.
★ಜನನೇಂದ್ರಿಯವನ್ನು ಶುಚಿಗೊಳಿಸಲು ಮಾಹಿಶ್ವರೈಸಿಂಗ್ ಸೋಪನ್ನು ಮಾತ್ರ ಬಳಸಿ.
★ಕಾಟನ್ ಪ್ಯಾಂಟಿಗಳನ್ನು ಬಳಸಿ.
★ ಮಲವಿಸರ್ಜನೆಯ ನಂತರ, ಸಾಧಾರಣವಾಗಿ ಸ್ತ್ರೀಯರು ಕೈಗಳನ್ನು ಹಿಂದಿನಿಂದ ಮುಂದಕ್ಕೆ ಚಲಿಸುತ್ತಾ ನೀರಿನಿಂದ ಶುಚಿ ಮಾಡಿಕೊಳ್ಳುತ್ತಾರೆ. ಇದು ಸರಿಯಾದ ರೀತಿಯಲ್ಲ.
★ಕೈಯನ್ನು ಹಿಂದಿನಿಂದ ಮುಂದಕ್ಕೆ ಚಲಿಸುವುದರಿಂದ ಮಲದ್ವಿರದಿಂದ ಬರುವ ಮಲ ಪದಾರ್ಥ ಜನೆಂದ್ರಿಯಕ್ಕೆ ಅಂಟಿಕೊಂಡು ಅದರೊಡನಿರುವ ಸೂಕ್ಷ್ಮ ಜೀವಿಗಳ ಮೂಲಕ, ಆ ಭಾಗ ಸೋಂಕಿಗಡಾಗಲು ಹಾಳಾಗಲು ದಾರಿಯಾಗುತ್ತದೆ.ಮಲದ್ವಾರ ಜನೇಂದ್ರಿಯ ದ್ವಾರಕ್ಕೆ ಬಹಳ ಹತ್ತಿರ ವಿರುವುದರಿಂದ ಹೀಗಾಗುವ ಅವಕಾಶವಿದೆ.
★ಮಲದ್ವಾರವನ್ನು ಶುಭ್ರಗೊಳಿಸುವ ಸರಿಯಾದ ರೀತಿಯೇನೆಂದರೆ, ಕೈಯನ್ನು ಮುಂದಿನಿಂದ ಹಿಂದಕ್ಕೆಳೆರೆದು.ಈ ಕ್ರಮ ಸ್ವಲ್ಪ ಅಸೌಕರ್ಯವಾಗಿದ್ದರೂ ಕೂಡಾ. ಕೆಲವು ದಿನಗಳಲ್ಲಿ ಇದೇ ರೂಡಿಯಾಗುತ್ತದೆ.
★ರತಿಕ್ರಿಯ ಪೂರ್ಣವಾದ ನಂತರ ಮೂತ್ರ ವಿಸರ್ಜನೆ ಮಾಡಿ ಬರಬೇಕು. ಹಾಗೆ ಮಾಡುವುದರಿಂದ ಪುರುಷಾಂಗದ ಮೂಲಕ ಯಾವುದಾದರೂ ಫ್ಯಾಕ್ಟೀರಿಯಾ ಒಳಗೆ ಸೇರಿದರೆ. ಮೂತ್ರದ ಮೂಲಕ ಹೂವು ಕೊಚ್ಚಿ ಹೋಗುತ್ತವೆ, ಆದರೆ ರತಿಕ್ರಿಯೆ ಆದ ತಕ್ಷಣವೇ ಮೂತ್ರ ವಿಸರ್ಜನೆ ಮಾಡಬಾರದು. ಸ್ವಲ್ಪ ಹೊತ್ತು ಬಿಡಬೇಕು. ಈ ವಿರಾಮ ವಿಲ್ಲದಿದ್ದರೆ, ಲೈಂಗಿಕ ಉದ್ರೇಕದ ಮೂಲಕ ಉಬ್ಬಿದ ಒಳಗಿನ ಕಣಜಾಲ ಮೂತ್ರಕೋಶವನ್ನು ಪೂರ್ತಿಯಾಗಿ ಖಾಲಿ ಮಾಡದಂತೆ ಅದು ಪಡಿಸುತ್ತವೆ.
★ನೀವೇನಾದರೂ ಗರ್ಭನಿರೋಧಕ ಕ್ರಮವಾಗಿ ಡಯಾಫ್ರಮ್ ಬಳಸುತ್ತಿದ್ದರೆ ಡಯಾಫ್ರಮ್ ಸರಿಯಾಗಿ ಅಳವಡಿಕೆಯಾಗಿದೆಯೋ ಇಲ್ಲವೋ ಪರೀಕ್ಷಿಸಿಕೊಳ್ಳಿ. ಡಯಾಫ್ರಮ್ ಬಹಳ ದೊಡ್ಡದಾಗಿದ್ದರೆ, ಇಲ್ಲವೇ ಸರಿಯಾಗಿ ಅಳವಡಿಕೆಯಾಗಿದ್ದರೆ ಬ್ಲಾಡರನ್ನು ಖಾಲಿ ಮಾಡಲು ಅಡ್ಡಿಯಾಗಿ,ಒಳಗೆ ಬ್ಯಾಕ್ಟೀರಿಯಾ ವೃದ್ಧಿಯಾಗಲು ಅವಕಾಶವಾಗುತ್ತದೆ
★ಮೂತ್ರದಲ್ಲಿನ ಉರಿ ಎರಡು ದಿನಗಳು ಕಳೆದರೂ ತಪ್ಪದೆ ಮೂತ್ರದಲ್ಲಿ ರಕ್ತವಿದ್ದು ಜ್ವರವು ಇದ್ದರೆ ಆಲಸ್ಯ ಮಾಡದೆ ಡಾಕ್ಟರನ್ನು ಸಂಪರ್ಕಿಸಿ ನೀವೇ ಆೄಂಟಿಬಯಾಟಿಕ್ಸ್ ತೆಗೆದುಕೊಳ್ಳಬೇಡಿ .
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರ ಭರ್ತಿ
ಈರುಳ್ಳಿ ಮೇಲಿರುವ ಕಪ್ಪು ಚುಕ್ಕೆ ತರುತ್ತೆ ಆಪತ್ತು ಆರೋಗ್ಯಕ್ಕೆ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.