ಮನೆ ಸಾಹಿತ್ಯ ಆಧ್ಯಾತ್ಮಿಕ  ಬೆಳವಣಿಗೆಗಾಗಿ ಎಲ್ಲವನ್ನು ತೊರೆಯಿರಿ

ಆಧ್ಯಾತ್ಮಿಕ  ಬೆಳವಣಿಗೆಗಾಗಿ ಎಲ್ಲವನ್ನು ತೊರೆಯಿರಿ

0

 ಸುಮೇಧ ಎಂಬ ಬಹಳ ಪ್ರಾಮಾಣಿಕ ಶಿಷ್ಯನೊಬ್ಬನಿದ್ದನು. ಅವನು ತೀವ್ರ ಪರಿಶ್ರಮದಿಂದ ಅಧ್ಯಾತ್ಮಿಕತೆಯನ್ನು ಅರಿಯಲು ಪ್ರಯತ್ನಿಸುತ್ತಿದ್ದನು. ಅವನು ಸಾಕಷ್ಟು ಪುಸ್ತಕಗಳನ್ನು ಓದಿದನು. ಹಲವಡೆ  ಪ್ರಯಾಣ ಮಾಡಿದನು. ಹಲವಾರು ಧಾನ್ಯ ಪಾಠಗಳನ್ನು ಸೇರಿದನು.

Join Our Whatsapp Group

ಆದರೆ ಈ ಪ್ರಯತ್ನಗಳಿಂದ ಫಲ ಸಿಗಲಿಲ್ಲ.ಕೊನೆಗೆ ಅವನು ಗುರುಗಳಲಿರುವ ಮಠವನ್ನು ಸೇರಿದನು. ಪ್ರತಿ ತಿಂಗಳು ಅವನು ಗುರುಗಳಿಗೆ ತಮ್ಮ ಆಧ್ಯಾತ್ಮಿಕ ಪ್ರಗತಿಯನ್ನು ತಿಳಿಸುತ್ತಿದ್ದನು.ಮೊದಲು ತಿಂಗಳು ಅವನು ನನ್ನ ಪ್ರಜ್ಞೆಯ ವಿಸ್ತರಣೆ ಹಾಗೂ ವಿಶ್ವದೊಂದಿಗೆ ನನ್ನ ಐಕ್ಯ ಭಾವನೆಯ ಅನುಭವ ಆಗುತ್ತಿದೆ ಹಾಗೂ ವಿಶ್ವದೊಂದಿಗೆ “ನನ್ನ ಐಕ್ಯ ಭಾವನೆಯ ಅನುಭವ ಆಗುತ್ತಿದೆ ”ಎಂದು ಬರೆದನು. ಗುರುಗಳು ಅವನ ಕಾಗದವನ್ನು ಎತ್ತಿ ಬಿಸಾಡಿದರು.ಎರಡನೆಯ ತಿಂಗಳು ಅವನು “ಕೊನೆಯ ನಾನು ಎಲ್ಲೆಡೆ ಸಿಸ್ಟಮ್ ಶಿಸ್ತೆಂಬುದಿದೆ ಎಂದು ಅರಿತೆ” ಎಂದು ಬರೆದನು. ಇದನ್ನು ನೋಡಿ ಗುರುಗಳಿಗೆ ಬಹಳ ನಿರಾಶೆಯಾಯಿತು. ಮೂರನೇಯ ತಿಂಗಳು ಅವನು ನನ್ನ ಅದ್ಭುತದ ದೃಷ್ಟಿಗೆ ಏಕ ಹಾಗೂ ಅನೇಕದ ನಿಗೂಢತೆಯು  ಪ್ರಕಟವಾಗಿದೆ ಎಂದು ಬರೆದಾಗ ಗುರುಗಳಿಗೆ ಸುಸ್ತಾಯಿತು. ಇದಾದ ಒಂದು ತಿಂಗಳು ಅವನು “ಯಾರೂ ಹುಟ್ಟಿಲ್ಲ ಯಾರೂ ಬದುಕುವುದಿಲ್ಲ ಮತ್ತು ಯಾರೂ ಸಾಯುವುದಿಲ್ಲ” ಎಂದು ಬರೆದನು. ಆಗ ಗುರುಗಳು ಬಹಳ ನೀರಾಶೆಯಾಯಿತು.

 ಇದಾದ ನಂತರ ಸುಮಾರು ಒಂದು ವರ್ಷ ಸಮೇಧನ ಬಗ್ಗೆ ಏನು ತಿಳಿಯಲಿಲ್ಲ.ಕೊನೆಗೆ ಗುರುಗಳು ಅವನಿಗೆ ಪ್ರತಿ ತಿಂಗಳು ಕೊಡಬೇಕಾದ ಪ್ರಗತಿಯ ಬಗ್ಗೆ ನೆನಪಿಸಿದರು. ಆಗ ಅವನೇನು ಬರೆದೆನೋ ಅದನ್ನು ನೋಡಿ ಗುರುಗಳಿಗೆ ಬಹಳ ಆನಂದವಾಯಿತು.

 ಪ್ರಶ್ನೆಗಳು

 1.ಸುಮೇಧ ಏನು ಬರೆದನು?

 2.ಈ ಕಥೆಯ ನೀತಿಯೇನು?

 ಉತ್ತರಗಳು

 1.ಅವನು “ನನಗೆ ಅದರ ಬಗ್ಗೆ ಯೋಚನೆಯಿಲ್ಲ” ಎಂದು ಬರೆದನು.

 2.ನೀವು ಕಲಿತದ್ದು ಅಥವಾ ಸೃಷ್ಟಿಸುವುದರ ಆಧಾರದಲ್ಲಿ ಆಧ್ಯಾತ್ಮಿಕ ಸಾಧನೆಯನ್ನು ಅಳೆಯುವುದಿಲ್ಲ. ಲೈಂಕಿಕ ಆನಂದಗಳು ಹಾಗೂ ನಿರೀಕ್ಷೆಗಳನ್ನು ಎಷ್ಟರಮಟ್ಟಿಗೆ ನೀವು ತ್ಯಜಿಸುತ್ತಿರಿ ಹಾಗೂ ಬಿಡುತ್ತೀರೆಂಬುದು ಮುಖ್ಯ.