ಮನೆ ಕಾನೂನು ನಟ ದುನಿಯಾ ವಿಜಯ್ ಗೆ ನೋಟಿಸ್ ನೀಡಲು ಮುಂದಾದ ಸಿಸಿಬಿ ಪೊಲೀಸರು

ನಟ ದುನಿಯಾ ವಿಜಯ್ ಗೆ ನೋಟಿಸ್ ನೀಡಲು ಮುಂದಾದ ಸಿಸಿಬಿ ಪೊಲೀಸರು

0

ಬೆಂಗಳೂರು: ‘ಭೀಮ’ ನಟ ದುನಿಯಾ ವಿಜಯ್​ಗೆ ಸಿಸಿಬಿ ಪೊಲೀಸರು ನೋಟಿಸ್ ಕೊಡಲಿಕ್ಕೆ ಸಿದ್ದತೆ ಮಾಡಿಕೊಂಡಿದ್ದಾರೆ. ಚಾಮರಾಜ ಪೇಟೆ ಸಿಸಿಬಿ ಕಚೇರಿಯ ಕೂಗಳತೆ ದೂರದಲ್ಲಿಯೇ ಮಾದಕವಸ್ತು ಸೇವನೆ ಮಾಡುತ್ತಿದ್ದಾರೆ ಎಂದು ದುನಿಯಾ ವಿಜಯ್​ ಹೇಳಿದ್ದರು. ಇದೀಗ ನಟನ ಹೇಳಿಕೆಯ ವಿಚಾರವಾಗಿ ಸಿಸಿಬಿ ನೋಟಿಸ್​ ಕೊಡಲು ಮುಂದಾಗಿದ್ದಾರೆ.

Join Our Whatsapp Group

ಭೀಮ ಸಿನಿಮಾದ ರಿಲೀಸ್​ ಬಳಿಕ ನಟ ದುನಿಯಾ ವಿಜಯ್​ ಚಾಮರಾಜಪೇಟೆ ಬಳಿ ಸ್ಥಳವೊಂದರ ಮೇಲೆ ದಾಳಿ ಮಾಡಿದ್ದರು. ಮಾದಕವಸ್ತು ಸೇವನೆಗೆ ಬಳಸುವ ಸಿರೀಂಜ್ ಸೇರಿ ಕೆಲ ವಸ್ತುಗಳನ್ನ ನಟ ಪತ್ತೆ ಮಾಡಿದ್ದರು.

ಇವಿಷ್ಟು ಅಲ್ಲದೆ, ನಗರದ ಕೆಲ ಮೆಡಿಕಲ್ ಶಾಪ್​​ಗಳಲ್ಲಿ ಟೈಡಾಲ್ ಮಾತ್ರೆಯನ್ನ ಮಾದಕ ವ್ಯಸನಿಗಳಿಗೆ ಮಾರಾಟ ಮಾಡ್ತಿದ್ದಾರೆಂದು ಫೇಸ್​ಬುಕ್ ಲೈವ್​ನಲ್ಲಿ ದುನಿಯಾ ವಿಜಯ್ ತಿಳಿಸಿದ್ದರು. ಈ ಸಂಬಂಧ ಪೊಲೀಸ್ ಅಧಿಕಾರಿಗಳು ಸುಮೋಟೋ ಕೇಸ್ ದಾಖಲಿಸಿಕೊಳ್ಳಬೇಕು ಎಂದಿದ್ದರು.

ಸಿಸಿಬಿ ಜಂಟಿ ಆಯುಕ್ತ ಚಂದ್ರಗುಪ್ತರವರು, ನಟ ದುನಿಯಾ ವಿಜಯ್​​ ಅವರನ್ನ ಕರೆಸಿ ಅವರ ಬಳಿ ಇರೋ ಮಾಹಿತಿ ಕಲೆಹಾಕಬೇಕು. ಮಾದಕವಸ್ತು ಅಡ್ಡೆಗಳ ಮೇಲೆ ದಾಳಿ ಮಾಡಬೇಕು ಎಂದು ಹೇಳಿದ್ದಾರೆ. ಈ ವಿಚಾರದ ಕುರಿತು ವಕೀಲ‌ ನಾರಾಯಣಸ್ವಾಮಿಯವರು ನಗರ ಪೊಲೀಸ್ ಆಯುಕ್ತ ದಯಾನಂದ್ ರಿಗೆ ದೂರು ನೀಡಿದ್ದಾರೆ.