ದಾವಣಗೆರೆ: ಆಕಸ್ಮಿಕವಾಗಿ ಮೈಮೇಲೆ ಬಿಸಿ ಸಾರು ಬಿದ್ದು ಗಾಯಗೊಂಡಿದ್ದ ಬಾಲಕ ಸಾವನ್ನಪ್ಪಿದ ಘಟನೆ ಚನ್ನಗಿರಿ ತಾಲೂಕಿನ ಯಲೋದಹಳ್ಳಿಯಲ್ಲಿ ವರದಿಯಾಗಿದೆ.
ಗ್ರಾಮದ ಹನುಮಂತಪ್ಪ ಎಂಬುವರ ಪುತ್ರ ಸಮರ್ಥ್ ಮೃತಪಟ್ಟ ಬಾಲಕ.
ಯಲೋದಹಳ್ಳಿ ಗ್ರಾಮದಲ್ಲಿ ಕಳೆದ ಎಂಟು ದಿನದ ಹಿಂದೆ ದೇವರ ಕಾರ್ಯಕ್ರಮದ ಸಂದರ್ಭದಲ್ಲಿ ಊಟದ ನಂತರ ಪಕ್ಕದಲ್ಲಿರುವ ಅಜ್ಜಿಯ ಮನೆಗೆ ಸಾರು ತೆಗೆದುಕೊಂಡು ಹೋಗವಾಗ ಅಕಸ್ಮಾತ್ತಾಗಿ ಸಮರ್ಥ ಮೈ ಮೇಲೆ ಬಿದ್ದಿತ್ತು.
ಏನೂ ಆಗುವುದಿಲ್ಲ ಎಂದು ಪೋಷಕರು ಸುಮ್ಮನಾಗಿದ್ದರು. ಗುರುವಾರ ತೀವ್ರ ನೋವು ಕಾಣಿಸಿಕೊಂಡಾಗ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಸಮರ್ಥ್ ಗುರುವಾರ ರಾತ್ರಿ ಸಾವನ್ನಪ್ಪಿದ್ದಾನೆ.
ಮೃತ ಸಮರ್ಥ್ ಯಲೋದಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದನು. ಸಮರ್ಥ ಮೈ ಮೇಲೆ ಸಾರು ಬೀಳಿಸಿಕೊಂಡು ಗಾಯಗೊಂಡಿದ್ದರೂ ಸಹ ದಿನಾಲು ಗೆಳೆಯರ ಜೊತೆ ಆಟವಾಡುವುದು, ಶಾಲೆಗೆ ಹೋಗುವುದು ಮಾಡುತ್ತಿದ್ದ. ಆದರೆ, ಗುರುವಾರ ತುಂಬಾ ನೊವು ಕಾಣಸಿಕೊಂಡ ಕಾರಣ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆಗೆ ದಾಖಲು ಮಾಡಿದ್ದೆವು. ಆದರೆ, ಉಳಿಯಲಿಲ್ಲ ಎಂದು ತಂದೆ ಹನುಮಂತಪ್ಪ ನೋವು ತೋಡಿಕೊಂಡಿದ್ದಾರೆ.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.