ಮನೆ ರಾಜ್ಯ ಮೈಮೇಲೆ ಬಿಸಿ ಸಾರು ಬಿದ್ದು ಗಾಯಗೊಂಡ ಬಾಲಕ ಸಾವು

ಮೈಮೇಲೆ ಬಿಸಿ ಸಾರು ಬಿದ್ದು ಗಾಯಗೊಂಡ ಬಾಲಕ ಸಾವು

0

ದಾವಣಗೆರೆ: ಆಕಸ್ಮಿಕವಾಗಿ ಮೈ‌ಮೇಲೆ ಬಿಸಿ ಸಾರು ಬಿದ್ದು ಗಾಯಗೊಂಡಿದ್ದ ಬಾಲಕ ಸಾವನ್ನಪ್ಪಿದ ಘಟನೆ ಚನ್ನಗಿರಿ ತಾಲೂಕಿನ ಯಲೋದಹಳ್ಳಿಯಲ್ಲಿ ವರದಿಯಾಗಿದೆ.

ಗ್ರಾಮದ ಹನುಮಂತಪ್ಪ ಎಂಬುವರ ಪುತ್ರ ಸಮರ್ಥ್ ಮೃತಪಟ್ಟ ಬಾಲಕ.

ಯಲೋದಹಳ್ಳಿ ಗ್ರಾಮದಲ್ಲಿ ಕಳೆದ ಎಂಟು ದಿನದ ಹಿಂದೆ ದೇವರ ಕಾರ್ಯಕ್ರಮದ ಸಂದರ್ಭದಲ್ಲಿ ಊಟದ ನಂತರ ಪಕ್ಕದಲ್ಲಿರುವ ಅಜ್ಜಿಯ ಮನೆಗೆ ಸಾರು ತೆಗೆದುಕೊಂಡು ಹೋಗವಾಗ ಅಕಸ್ಮಾತ್ತಾಗಿ ಸಮರ್ಥ ಮೈ ಮೇಲೆ ಬಿದ್ದಿತ್ತು.

ಏನೂ ಆಗುವುದಿಲ್ಲ ಎಂದು ಪೋಷಕರು ಸುಮ್ಮನಾಗಿದ್ದರು. ಗುರುವಾರ ತೀವ್ರ ನೋವು ಕಾಣಿಸಿಕೊಂಡಾಗ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಸಮರ್ಥ್ ಗುರುವಾರ ರಾತ್ರಿ ಸಾವನ್ನಪ್ಪಿದ್ದಾನೆ.

ಮೃತ ಸಮರ್ಥ್ ಯಲೋದಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದನು. ಸಮರ್ಥ ಮೈ ಮೇಲೆ ಸಾರು ಬೀಳಿಸಿಕೊಂಡು ಗಾಯಗೊಂಡಿದ್ದರೂ ಸಹ ದಿನಾಲು ಗೆಳೆಯರ ಜೊತೆ ಆಟವಾಡುವುದು, ಶಾಲೆಗೆ ಹೋಗುವುದು ಮಾಡುತ್ತಿದ್ದ. ಆದರೆ, ಗುರುವಾರ ತುಂಬಾ ನೊವು ಕಾಣಸಿಕೊಂಡ ಕಾರಣ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆಗೆ ದಾಖಲು ಮಾಡಿದ್ದೆವು. ಆದರೆ, ಉಳಿಯಲಿಲ್ಲ ಎಂದು ತಂದೆ ಹನುಮಂತಪ್ಪ ನೋವು ತೋಡಿಕೊಂಡಿದ್ದಾರೆ.

ಹಿಂದಿನ ಲೇಖನಮಗುವಿನ ಇತರ ಅಭ್ಯಾಸಗಳು
ಮುಂದಿನ ಲೇಖನಯೋಗರಾಜ್ ಭಟ್ ನಿರ್ದೇಶನದ ‘ಗರಡಿ’ ಚಿತ್ರದ ಟ್ರೈಲರ್‌ ಬಿಡುಗಡೆ