ಮೈಸೂರು : ಮೃಗಾಲಯದಲ್ಲಿದ್ದ ಐದು ವರ್ಷದ ತಾಯಮ್ಮ ಎಂಬ ಹುಲಿ ಅನಾರೋಗ್ಯದಿಂದ ನೆನ್ನೆ (ಗುರುವಾರ) ಮೃತಪಟ್ಟಿದೆ.
2021ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಿಂದ ರಕ್ಷಣೆ ಮಾಡಿ, ಮೈಸೂರು ಮೃಗಾಲಯಕ್ಕೆ ತಂದು ಆರೈಕೆ ಮಾಡಲಾಗುತ್ತಿತ್ತು. ಕಳೆದ 10 ದಿನಗಳಿಂದ ರಕ್ತಕಣದ ಸಮಸ್ಯೆಯಿಂದ ಬಳಲುತ್ತಿತ್ತು. ಈ ಸಂಬಂಧ ಚಿಕಿತ್ಸೆ ನೀಡಲಾಗಿತ್ತು.
ಇನ್ನೂ ಅನಾರೋಗ್ಯದಿಂದ ಬಳುತ್ತಿದ್ದ ಕಾರಣ ತಾಯಮ್ಮ ಹುಲಿ ಆಹಾರ ತ್ಯಜಿಸಿತ್ತು. ಚಿಕಿತ್ಸೆ ಕೊಡಿಸಿದರೂ ಕೂಡ ಫಲಕಾರಿಯಾಗದೇ ಸಾವನ್ನಪ್ಪಿದೆ ಎಂದು ವರದಿಯಾಗಿದೆ.















