ಮನೆ ಅಪರಾಧ ಕಾರಿಗೆ ಅಡ್ಡ ಬಂದ ಕುದುರೆ: ವಾಹನಗಳ ಸರಣಿ ಅಪಘಾತ- ಐವರಿಗೆ ಗಂಭೀರ ಗಾಯ

ಕಾರಿಗೆ ಅಡ್ಡ ಬಂದ ಕುದುರೆ: ವಾಹನಗಳ ಸರಣಿ ಅಪಘಾತ- ಐವರಿಗೆ ಗಂಭೀರ ಗಾಯ

0

ರಾಮನಗರ: ಕಾರಿಗೆ ಕುದುರೆ ಅಡ್ಡ ಬಂದ ಪರಿಣಾಮ ವಾಹನಗಳ ಸರಣಿ ಅಪಘಾತ ನಡೆದು ಇಬ್ಬರು ಮಕ್ಕಳು ಸೇರಿದಂತೆ ಐವರು ಗಂಭೀರ ಗಾಯಗೊಂಡ ಘಟನೆ ಮಾಗಡಿ ತಾಲೂಕಿನಲ್ಲಿ ನಡೆದಿದೆ. ಘಟನೆಯಲ್ಲಿ ಕುದುರೆ ಸ್ಥಳದಲ್ಲೇ ಸಾವನ್ನಪ್ಪಿದೆ.

Join Our Whatsapp Group

ಮಾಗಡಿ ತಾಲೂಕಿನ ತಿಪ್ಪಸಂದ್ರ ಹ್ಯಾಂಡ್ ಪೋಸ್ಟ್ ಬಳಿಯ ಮಾಚೋಹಳ್ಳಿ ಗೇಟ್‌ನಲ್ಲಿ ಘಟನೆ ನಡೆದಿದೆ.

ಕುದುರೆಗೆ ಡಿಕ್ಕಿ ಹೊಡೆದ ಕಾರು ಗ್ಯಾಸ್ ಟ್ಯಾಂಕರ್ ಲಾರಿಗೆ ಗುದ್ದಿದೆ. ಅಷ್ಟೇ ಅಲ್ಲದೆ ಲಾರಿಗೆ ಡಿಕ್ಕಿ ಹೊಡೆದ ಕಾರಿಗೆ ಕೆ‌ಎಸ್‌ಆರ್‌ಟಿಸಿ ಬಸ್ ಬಂದು ಡಿಕ್ಕಿಯಾಗದೆ. ಬಸ್ ಡಿಕ್ಕಿ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ.

ಗಾಯಾಳುಗಳನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಸೋಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೋಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನರಾಮನಗರ: ಈಜಲು ತೆರಳಿದ್ದ ಮೂವರು ಬಾಲಕರು ನೀರುಪಾಲು
ಮುಂದಿನ ಲೇಖನಪೆನ್‌ಡ್ರೈವ್ ಕೇಸ್‌ನಲ್ಲಿ ಹೆಚ್‌ಡಿಕೆ ಹೆಸರು ಹೇಳಲು ಡಿಕೆಶಿ 100 ಕೋಟಿ ರೂ ಆಫ‌ರ್: ದೇವರಾಜ್