ಮನೆ ರಾಜ್ಯ ವಿದ್ಯುತ್ ದುರಸ್ಥಿ ವೇಳೆ ಏಕಾ ಏಕಿ ವಿದ್ಯುತ್ ಹರಿದು ಲೈನ್ ಮ್ಯಾನ್ ಸಾವು

ವಿದ್ಯುತ್ ದುರಸ್ಥಿ ವೇಳೆ ಏಕಾ ಏಕಿ ವಿದ್ಯುತ್ ಹರಿದು ಲೈನ್ ಮ್ಯಾನ್ ಸಾವು

0

ಬಳ್ಳಾರಿ  ವಿದ್ಯುತ್ ಕಂಬದಲ್ಲಿ ಲೈನ್ ಮ್ಯಾನ್  ದುರಸ್ಥಿ ಕಾರ್ಯ ನಿರ್ವಹಿಸುತ್ತಿದ್ದ ಏಕಾ ಏಕಿ ವಿದ್ಯುತ್ ಹರಿದು ರುಂಡ ಮುಂಡ ಬೇರ್ಪಟ್ಟು ಸ್ಥಳದಲ್ಲೇ ಕಾರ್ಮಿಕ ಸಾವಿಗೀಡಾದ ಘಟನೆ ಕುರುಗೋಡು ತಾಲೂಕಿನ ದಮ್ಮೂರು ಗ್ರಾಮದಲ್ಲಿ ನಡೆದಿದೆ.

ವಿದ್ಯುತ್ ಸಂಪರ್ಕವಿಲ್ಲದ್ದ ಸಮಯದಲ್ಲಿ ದುರಸ್ಥಿ ಮಾಡಲು ಗ್ರಾಮದ ಭದ್ರ ಎನ್ನುವ ಹೊರಗುತ್ತಿಗೆ ಲೈನ್ ಮ್ಯಾನ್ ಮುಂದಾಗಿದ್ದ. ಇದೇ ಸಂದರ್ಭದಲ್ಲಿ ಏಕಾ ಏಕಿ ವಿದ್ಯುತ್ ಹರಿದು ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಕಳೆದ ಹಲವು ವರ್ಷಗಳಿಂದ ಖಾಸಗಿ ಲೈನ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಭದ್ರ. ಬೆಳಗ್ಗೆ 6 ಗಂಟೆ ಸಮಯದಲ್ಲಿ ವಿದ್ಯುತ್ ಕಡಿತವಾಗಿರುವುದನ್ನ ಗಮನಿಸಿ ಗ್ರಾಮದ ಹೊರ ವಲಯದ ಜಮೀನೊಂದರ ವಿದ್ಯುತ್ ಸಂಪರ್ಕದ ದುರಸ್ಥಿಗೆ ಮುಂದಾಗಿದ್ದ ಎನ್ನಲಾಗಿದ್ದು, ಇದೇ ಸಮಯದಲ್ಲಿ ವಿದ್ಯುತ್ ಏಕಾ ಏಕಿ ಹರಿದು ವಿದ್ಯುತ್ ಕಂಬದ ಮೇಲಿದ್ದ ಲೈನ್ ಮ್ಯಾನ್ ರುಂಡ ಕೆಳಬಿದ್ದರೆ, ಮುಂಡ ಕಂಭದ ಮೇಲೆಯೇ ಇದೆ.

ಘಟನೆಗೆ ಇಡೀ ಗ್ರಾಮವೆ ದುಃಖ ವ್ಯಕ್ತಪಡಿಸಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಘಟನಾ ಸ್ಥಳಕ್ಕೆದ ಕುರುಗೋಡು ಠಾಣೆಯ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಹಿಂದಿನ ಲೇಖನಬೆಂಗಳೂರು- ಶಿವಮೊಗ್ಗ ನಾಗರಿಕ ವಿಮಾನಯಾನ ಸೇವೆ ಆರಂಭ
ಮುಂದಿನ ಲೇಖನಸೆಪ್ಟೆಂಬರ್ 4 ರಂದು ಬರಪೀಡಿತ ತಾಲೂಕುಗಳ ಘೋಷಣೆ: ಸಚಿವ ಕೃಷ್ಣ ಬೈರೇಗೌಡ