ಮನೆ ಅಪರಾಧ ಈಜಲು ತೆರಳಿದ್ದ ವ್ಯಕ್ತಿಯೊಬ್ಬರು ಕೃಷಿ ಹೊಂಡದಲ್ಲಿ ಮುಳುಗಿ ಸಾವು

ಈಜಲು ತೆರಳಿದ್ದ ವ್ಯಕ್ತಿಯೊಬ್ಬರು ಕೃಷಿ ಹೊಂಡದಲ್ಲಿ ಮುಳುಗಿ ಸಾವು

0

ಕೋಲಾರ : ಈಜಲು ತೆರಳಿದ್ದ ವ್ಯಕ್ತಿಯೊಬ್ಬರು ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟ ಘಟನೆ ಕೋಲಾರ ತಾಲೂಕಿನ ನಾಗನಾಳ ಗ್ರಾಮದಲ್ಲಿ ನಡೆದಿದೆ.

Join Our Whatsapp Group

ಮೃತ ಯುವಕನನ್ನು ಗೌತಮ್ ಗೌಡ (26) ಎಂದು ಗುರುತಿಸಲಾಗಿದೆ. ಈತ ಮೈಸೂರಿನ ರಾಘವೇಂದ್ರನಗರ ಬಡಾವಣೆ ನಿವಾಸಿಯಾಗಿದ್ದಾರೆ.

ಘಟನೆ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗೌತಮ್ ಗೌಡ ತಂದೆಯ ಊರಾದ ವೇಮಗಲ್ ಸಮೀಪದ ನಾಗನಾಳ ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ, ಸರಿಯಾಗಿ ಈಜು ಬಾರದಿದ್ದರೂ ಈಜಲು ಹೋಗಿದ್ದರು. ಆರಂಭದಲ್ಲಿ ಚೆನ್ನಾಗಿಯೇ ಈಜುತ್ತಿದ್ದ ಅವರು ಕ್ರಮವೇಣ ಮುಳುಗಲಾರಂಭಿಸಿದರು.

ಯುವಕ ನೀರಿಗೆ ಧುಮುಕಿದಲ್ಲಿಂದಲೇ ಆತನ ತಂಗಿ ವಿಡಿಯೋ ಮಾಡುತ್ತಿದ್ದರು. ಅಣ್ಣ ಮುಳುಗುತ್ತಿದ್ದಾನೆ ಎಂಬುದು ಅವರಿಗೂ ಅವರಿವಾದಂತಿಲ್ಲ. ದುರದೃಷ್ಟವಶಾತ್, ನೋಡ ನೋಡುತ್ತಿದ್ದಂತೆಯೇ ಗೌತಮ್ ಗೌಡ ನೀರಲ್ಲಿ ಮುಳುಗಿ ಪ್ರಾಣ ಬಿಟ್ಟದ ದೃಶ್ಯ ವಿಡಿಯೋದಲ್ಲಿದೆ.

ಹಿಂದಿನ ಲೇಖನಬೆಂಗಳೂರು: ರಸ್ತೆಯಲ್ಲೇ 10 ಬಾರಿ ಇರಿದು ಪತ್ನಿಯ ಕೊಂದ ಪತಿ
ಮುಂದಿನ ಲೇಖನಮುಖ್ಯಮಂತ್ರಿಯಾಗಲು ಡಿ ಕೆ ಶಿವಕುಮಾರ್ ಏನಾದರೂ ಮಾಡಬಲ್ಲರು: ಮಾಜಿ ಶಾಸಕ ರಾಜುಗೌಡ