ಹಾವೇರಿ : ಇಂದು ಮುಂಜಾನೆ ಹಿರೇಕೆರೂರು ಪಟ್ಟಣದಲ್ಲಿ ಕಾಡಾನೆ ಕಾಣಿಸಿಕೊಂಡಿದೆ. ಹಿರೇಕೆರೂರು ಪಟ್ಟಣದ ದುರ್ಗಾದೇವಿ ನಗರದ ಶಾಸಕರ ಮಾದರಿ ಶಾಲೆಯ ಗೇಟ್ ಮುರಿದು ಆನೆ ಒಳ ಪ್ರವೇಶಿಸಿದೆ ಎಂದು ಹೇಳಲಾಗಿದೆ.
ಆರಂಭದಲ್ಲಿ ಬ್ಯಾಡಗಿ ಬಳಿಕ ರಾಣೆಬೆನ್ನೂರು ಈಗ ಹಿರೇಕೆರೂರಿನಲ್ಲಿ ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ರೈತರ ಜಮೀನಿನಲ್ಲಿ ಬೆಳೆದಿದ್ದ, ಬೆಳೆಯನ್ನು ಹಾನಿ ಮಾಡುತ್ತಾ ಆನೆ ನುಗ್ಗುತ್ತಿದೆ.
ನಿನ್ನೆ ರಾಣೆಬೇನ್ನೂರು ತಾಲೂಕಿನ ಕುಸಗೂರ ಗ್ರಾಮದ ಬಳಿ ಆನೆ ಪ್ರತ್ಯಕ್ಷವಾಗಿತ್ತು. ಇವತ್ತು ಶಿಕಾರಿಪುರದತ್ತ ಆನೆ ಮುಖ ಮಾಡಿದ್ದು ಸೆರೆಹಿಡಿಯಲು 4 ದಿನಗಳಿಂದ ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ. ಆದರೆ ಒಂದೇ ಕಡೆ ನಿಲ್ಲದೆ ಬೇರೆ ಕಡೆ ಕಾಡಾನೆ ಹೋಗುತ್ತಿರುವುದರಿಂದ ಸೆರೆ ಹಿಡಿಯಲು ಕಷ್ಟವಾಗುತ್ತಿದೆ ಎಂದು ತಿಳಿದುಬಂದಿದೆ.















