ಮನೆ ಅಪರಾಧ ತಡವಾಗಿ ಮನೆಗೆ ಬರುವ ವಿಷಯಕ್ಕೆ ಪೋಷಕರಿಂದ ಬುದ್ಧಿವಾದ : ಯುವಕ ಆತ್ಮಹತ್ಯೆಗೆ ಶರಣು

ತಡವಾಗಿ ಮನೆಗೆ ಬರುವ ವಿಷಯಕ್ಕೆ ಪೋಷಕರಿಂದ ಬುದ್ಧಿವಾದ : ಯುವಕ ಆತ್ಮಹತ್ಯೆಗೆ ಶರಣು

0

ರಾಯಚೂರು: ತಂದೆ-ತಾಯಿಯ ಬುದ್ಧಿವಾದ ಸಹಿಸಲಾಗದೆ ಮನನೊಂದ 21 ವರ್ಷದ ಯುವಕನೊಬ್ಬ ವಿದ್ಯುತ್ ಕಂಬಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ರಾಯಚೂರಿನ ಶಕ್ತಿನಗರದಲ್ಲಿ ನಡೆದಿದೆ.

ಮೃತ ಯುವಕನನ್ನು ಸುದೀಪ್ ಕುಮಾರ್(21) ಎಂದು ಗುರುತಿಸಲಾಗಿದ್ದು, ಖಾಸಗಿ ಫಾರ್ಮಾ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.

ಸುದೀಪ್ ಪ್ರತಿದಿನವೂ ತಡವಾಗಿ ಮನೆಗೆ ಬರುತ್ತಿದ್ದ. ಈ ಹಿನ್ನೆಲೆಯಲ್ಲಿ ಪೋಷಕರು ಆತನ ಮೇಲೆ ಕೋಪಗೊಂಡು ಬುದ್ಧಿವಾದ ಹೇಳಿದರು. ಇದರಿಂದ ಮನನೊಂದಿದ್ದ ಸುದೀಪ್ ಮದ್ಯದ ಅಮಲಿನಲ್ಲಿ ದುಡುಕಿನ ನಿರ್ಧಾರ ತೆಗೆದುಕೊಂಡು, ಮನೆಯಮುಂದಿನ ವಿದ್ಯುತ್ ಕಂಬಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶಕ್ತಿನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಮುಂದುವರೆದಿದೆ.