ಎಕ್ಕದ ಗಿಡವನ್ನು ಜೈಂಟ್ ಕ್ಯಾಲೋಟ್ರೋಪ್, ಇದನ್ನು ವೈಜ್ಞಾನಿಕವಾಗಿ ಕ್ಯಾಲೋಟ್ರೋಪಿಸ್ ಗಿಗಾಂಟಿಯಾ ಎಂದು ಕರೆಯಲಾಗುತ್ತಿದೆ.
ಸಾಂಪ್ರದಾಯಿಕ ಔಷಧಿ ಪದ್ಧತಿಯಲ್ಲಿ ಎಕ್ಕದ ಗಿಡ ಜನಪ್ರಿಯ ಔಷಧಿ ಸಸ್ಯ ಎನಿಸಿಕೊಂಡಿದೆ. ಹೂವು ಗಿಡ ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿದ್ದರೂ ಕೂಡ ಅದನ್ನು ಬಳಸುವಾಗ ಕೆಲವು ಮುನ್ನೆಚ್ಚರಿಕೆಯನ್ನು ವಹಿಸಬೇಕು ಇಲ್ಲವಾದರೆ ಆರೋಗ್ಯದ ಬದಲು ಅನಾರೋಗ್ಯದ ಸಮಸ್ಯೆ ಉಂಟಾಗಬಹುದು.
ಎಕ್ಕದ ರಸ ಅಥವಾ ಎಕ್ಕದ ಔಷಧವನ್ನು ಹೇಗೆ ತೆಗೆದುಕೊಳ್ಳಬೇಕು ಎಷ್ಟು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ವೈದ್ಯರನ್ನ ಕೇಳಿ ತಿಳಿದುಕೊಳ್ಳಬೇಕು ಇಲ್ಲವಾದರೆ ಅಡ್ಡ ಪರಿಣಾಮಗಳು ಉಂಟಾಗಬಹುದು.
ಮಿಲ್ಕ್ ವೀಡ್ ಅಥವಾ ಒಲಿಯಾಂಡರ್ ಸಸ್ಯಗಳು ಆಪೋಸಿನೆಸಿಯ ಕುಟುಂಬದ ಸಸ್ಯಗಳಾಗಿವೆ. ದೇಹದ ಯಾವುದಾದರೂ ಒಂದು ಭಾಗದಲ್ಲಿ ಪ್ಯಾಚ್ ರೀತಿಯಲ್ಲಿ ಸ್ವಲ್ಪ ಹಚ್ಚಿ ಪರೀಕ್ಷೆ ಮಾಡಿ ನಂತರ ಅದನ್ನು ಬಳಸಬೇಕು ನಿಮ್ಮ ತ್ವಚೆಗೆ ಅದು ಸೂಟ್ ಆಗುತ್ತದೆಯೇ ಎಂಬುದನ್ನು ನೋಡಿಕೊಳ್ಳಬೇಕು.
ಗುಣಲಕ್ಷಣಗಳು ಇರುವುದರಿಂದ ಇದು ಸಾಕಷ್ಟು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ.
ಗಿಡದಲ್ಲಿ ಲಾಟಿಕ್ಸ್ ಎನ್ನುವ ಅಂಶ ಇದ್ದು, ಪುರಾತನ ಕಾಲದಿಂದಲೂ ಇದನ್ನು ಬಳಸಿಕೊಂಡು ಬರಲಾಗುತ್ತಿದೆ. ಗಿಡದ ರಸ ಗಾಯವನ್ನು ತಕ್ಷಣಕ್ಕೆ ಗುಣಪಡಿಸುತ್ತದೆ ಪುನ:ಸ್ಥಾಪಿಸಲು ಇದು ಸಹಾಯ ಮಾಡುತ್ತದೆ. ಅಲ್ಲದೆ ಇದರಲ್ಲಿರುವ ಆಂಟಿ ಮೈಕ್ರೋಬಿಯಲ್ ಗುಣಲಕ್ಷಣದಿಂದಾಗಿ ಸೋಂಕುಗಳನ್ನು ಕೂಡ ತಡೆಗಟ್ಟಬಹುದು.
ಅಸ್ತಮಾ,ಬ್ರಾಂಕೈಟಿಸ್, ಕೆಮ್ಮು ಮೊದಲಾದ ಸಮಸ್ಯೆಗಳಿಗೆ ಇದು ಅತ್ಯುತ್ತಮ ಪರಿಹಾರ ನೀಡುತ್ತದೆ. ದೇಹದಲ್ಲಿ ಕಾಣಿಸಿಕೊಳ್ಳುವ ದದ್ದು, ತುರಿಕೆ ಸೋರಿಯಾಸಿಸ್ ಮೊದಲಾದ ಚರ್ಮ ಸಂಬಂಧಿ ಕಾಯಿಲೆಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುತ್ತದೆ.
ಅಡ್ಡ ಪರಿಣಾಮಗಳು: ಗಿಡದ ಔಷಧಿ ಬಹಳ ಒಳ್ಳೆಯದು ನಿಜ ಆದರೆ ಇದರ ಬಳಕೆ ಸರಿಯಾಗಿ ಆಗದೆ ಇದ್ದಲ್ಲಿ ಕೆಲವು ಅಡ್ಡ ಪರಿಣಾಮಗಳು ಕೂಡ ಉಂಟಾಗಬಹುದು ಹಾಗಾಗಿ ಇದನ್ನು ಬಳಕೆ ಮಾಡುವುದಕ್ಕೂ ಮೊದಲು ಇರುವ ಅಡ್ಡ ಪರಿಣಾಮಗಳ ಬಗ್ಗೆಯೂ ತಿಳಿದುಕೊಳ್ಳುವುದು ಬಹಳ ಮುಖ್ಯ.
ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡದೆ ಇದ್ದರೆ ಇದು ಜೀರ್ಣಾಂಗದ ಸಮಸ್ಯೆಯನ್ನು ಉಂಟು ಮಾಡಬಹುದು ಅತಿಸಾರ, ವಾಕರಿಕೆ ಅಥವಾ ವಾಂತಿ ಮೊದಲಾದ ಸಮಸ್ಯೆಗೆ ಕಾರಣವಾಗಬಹುದು. ಕೆಲವರಿಗೆ ಈ ರಸ ಅವರ ತ್ವಚೆಗೆ ಸರಿ ಹೊಂದದೆ ಇರಬಹುದು ಇಂತಹ ಸಂದರ್ಭದಲ್ಲಿ ತುರಿಕೆ ಹೆಚ್ಚಾಗುವುದು ಊತ ಕಾಣಿಸಿಕೊಳ್ಳುವುದು ಮೊದಲಾದ ಸಮಸ್ಯೆಗಳು ಉಂಟಾಗಬಹುದು ಹಾಗಾಗಿ ಇದನ್ನು ಸಂಪೂರ್ಣ ದೇಹಕ್ಕೆ ಹಚ್ಚುವುದಕ್ಕೂ ಮೊದಲು ದೇಹದ ಸಣ್ಣ ಚರ್ಮದ ಭಾಗಕ್ಕೆ ಹಚ್ಚಿ ಯಾವುದೇ ಅಡ್ಡ ಪರಿಣಾಮ ಇಲ್ಲ ಎಂಬುದನ್ನು ಖಚಿತ ಪಡಿಸಿಕೊಂಡು ನಂತರ ಬಳಕೆ ಮಾಡಿ.
ಎಕ್ಕದ ರಸದಲ್ಲಿ ಎಂಬುದು ಕಂಡು ಬಂದಿದೆ ಇದು ಹೃದಯದ ಕ್ರಿಯೆಯ ಮೇಲೆ ಪರಿಣಾಮ ಉಂಟು ಮಾಡಿ ಹೃದಯದ ಸಮಸ್ಯೆಗೆ ಕಾರಣವಾಗಬಹುದು ಜೊತೆಗೆ ಅಧಿಕಾರದಂತಹ ಸಮಸ್ಯೆ ಕೂಡ ಎದುರಿಸಬೇಕಾಗಬಹುದು.
ತಜ್ಞರ ಸಹಾಯವನ್ನು ಪಡೆದುಕೊಂಡು ಇದರ ಸರಿಯಾದ ಬಳಕೆ ತಿಳಿದುಕೊಂಡರೆ ಈ ಔಷಧದಿಂದಲೇ ಹಲವು ಅನಾರೋಗ್ಯಕರ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.